Webdunia - Bharat's app for daily news and videos

Install App

ಇಂದಿರಾ ಕ್ಯಾಂಟೀನ್ ಮೆನುವಿನಲ್ಲಿ ಏನೇನಿರುತ್ತೆ?

Webdunia
ಗುರುವಾರ, 17 ಆಗಸ್ಟ್ 2017 (08:42 IST)
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟೀನ್ ನ್ನು ನಿನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಾರ್ಪಣೆ ಮಾಡಿದ್ದಾರೆ.

 
ಅಗ್ಗದ ದರದಲ್ಲಿ ಊಟ, ಉಪಾಹಾರ ನೀಡುವುದು ಈ ಕ್ಯಾಂಟೀನ್ ನ ಗುರಿ. ಇದರಿಂದ ಹಸಿವು ಮುಕ್ತ ಕರ್ನಾಟಕ ಮಾಡಬಹುದು ಮತ್ತು ಬಡವರಿಗೂ ಅಗ್ಗದ ದರದಲ್ಲಿ ಊಟ ಸಿಗುವಂತಾಗುವುದು ಎನ್ನುವುದು ಸಿಎಂ ಸಿದ್ದರಾಮಯ್ಯ ಕನಸು.

ಇದೀಗ ಈ ಕ್ಯಾಂಟೀನ್ ಮೆನುವಿನಲ್ಲಿ ಏನೇನಿರಬಹುದು ಎಂಬ ಕುತೂಹಲ ನಿಮಗಿರುತ್ತೆ ಅಲ್ವಾ? ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ವಡೆ, ದೋಸೆ, ಉಪ್ಪಿಟ್ಟು, ವಾಂಗಿ ಬಾತ್, ಚಿತ್ರಾನ್ನ, ಪುಳಿಯೋಗರೆ ಸಿಗಲಿದೆ. ಆದರೆ ಅದಕ್ಕೂ ದಿನ ನಿಗದಿಯಿದೆ. ಒಂದೊಂದು ದಿನ ಒಂದೊಂದು ತಿಂಡಿ ಸಿಗಲಿದೆ.

ಬೆಳಿಗ್ಗೆ 7.30 ರಿಂದ 9.30 ರವರೆಗೆ ಉಪಾಹಾರ ದೊರೆಯಲಿದೆ. ಇಡ್ಲಿ ಎಲ್ಲಾ ದಿನಗಳಲ್ಲೂ ಲಭ್ಯ. ಆದರೆ ಪುಳಿಯೋಗರೆ ಸೋಮವಾರ, ಖಾರಾಬಾತ್ ಮಂಗಳವಾರ, ಬುಧವಾರ ಪೊಂಗಲ್,ಗುರುವಾರ ರವಾ ಖಿಚಡಿ, ಶುಕ್ರವಾರ ಚಿತ್ರಾನ್ನ ಮತ್ತು ಶನಿವಾರಗಳಂದು ಮಾತ್ರ ವಾಂಗಿಬಾತ್ ಜತೆಗೆ ಖಾರಾಬಾತ್, ಕೇಸರೀಬಾತ್ ಸಿಗಲಿದೆ.

ಇನ್ನು ಊಟದ ಸಮಯ ಮಧ್ಯಾಹ್ನ 12.30 ರಿಂದ 2.30 ರವರೆಗೆ. ಪ್ರತೀ ದಿನ ಅನ್ನ ಸಾಂಬಾರ್, ಮೊಸರನ್ನ ಸಿಗಲಿದೆ. ಅದರ ಜತೆಗೆ ಒಂದೊಂದು ದಿನ ಟೊಮೆಟೊ ಬಾತ್, ಚಿತ್ರಾನ್ನ, ಬಿಸಿಬೇಳೆ ಬಾತ್, ಮೆಂತೆ ಪುಲಾವ್ ಮೊದಲಾದ ವೆರೈಟಿ ರೈಸ್ ಬಾತ್ ಸವಿಯಬಹುದು. ಆದರೆ ಒಬ್ಬರಿಗೆ ಒಂದು ಟೋಕನ್ ಮಾತ್ರ ಲಭ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments