Select Your Language

Notifications

webdunia
webdunia
webdunia
webdunia

ಬಿಬಿಎಂಪಿ: ಕಾಂಗ್ರೆಸ್ ನಾಯಕರ ವಶದಲ್ಲಿ ಆರು ಮಂದಿ ಪಕ್ಷೇತರ ಸದಸ್ಯರು

ಬಿಬಿಎಂಪಿ: ಕಾಂಗ್ರೆಸ್ ನಾಯಕರ ವಶದಲ್ಲಿ ಆರು ಮಂದಿ ಪಕ್ಷೇತರ ಸದಸ್ಯರು
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2015 (15:41 IST)
ನಗರದ ದೊಮ್ಮುಲುರು ಬಳಿಯಿರುವ ಸಚಿವರೊಬ್ಬರ ಮಾಲೀಕತ್ವದಲ್ಲಿರುವ ಹೋಟೆಲ್‌ನಲ್ಲಿ ಆರು ಮಂದಿ ಪಕ್ಷೇತರ ಸದಸ್ಯರು ಸಭೆ ಸೇರಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಆರು ಮಂದಿ ಪಕ್ಷೇತರ ಶಾಸಕರ ಕಾಂಗ್ರೆಸ್ ನಾಯಕರ ಸುರ್ಪದಿಯಲ್ಲಿದ್ದು, ಇದೀಗ ಹೋಟೆಲ್‌ನಿಂದ ರಹಸ್ಯ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
 
ಕೋನೇನ್ ಅಗ್ರಹಾರ ಪಾಲಿಕೆ ಸದಸ್ಯ ಚಂದ್ರಪ್ಪ ರೆಡ್ಡಿ, ಮಾರತ್‌ಹಳ್ಳಿ ವಾರ್ಡ್ ಸದಸ್ಯ ಎಸ್. ರಮೇಶ್, ದೊಮ್ಮಲೂರು ವಾರ್ಡ್ ಸದಸ್ಯ ,ಹೊಯ್ಸಳ್ ನಗರ ವಾರ್ಡ್ ಸದಸ್ಯ ಅನಂದ್ ಕುಮಾರ್, ಸಗಾಯ ಪುರಂ ವಾರ್ಡ್ ಸದಸ್ಯ ಏಳುಮಲೈ, ಪಕ್ಷೇತರ ಸದಸ್ಯೆ ಗಾಯಿತ್ರಿ ಕಾಂಗ್ರೆಸ್ ನಾಯಕರೊಂದಿಗಿದ್ದಾರೆ ಎನ್ನಲಾಗಿದೆ.
 
ಪಕ್ಷೇತರ ಸದಸ್ಯರು ತಮ್ಮ ಮೊಬೈಲ್‌ಗಳನ್ನು ಸ್ವಿಚ್ಚ ಆಫ್ ಮಾಡಿದ್ದರಿಂದ ಯಾರ ಕೈಗೂ ಸಿಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. 
 

Share this Story:

Follow Webdunia kannada