Select Your Language

Notifications

webdunia
webdunia
webdunia
webdunia

ಸಚಿವ ಡಿಕೆಶಿವಕುಮಾರ್‌ಗೆ ಫೋನ್‌ನಲ್ಲಿ ಬೈಗುಳ: ಆರೋಪಿ ಬಂಧನ

ಸಚಿವ ಡಿಕೆಶಿವಕುಮಾರ್‌ಗೆ ಫೋನ್‌ನಲ್ಲಿ ಬೈಗುಳ: ಆರೋಪಿ ಬಂಧನ
ಸುಳ್ಯ , ಸೋಮವಾರ, 29 ಫೆಬ್ರವರಿ 2016 (20:13 IST)
ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ಫೋನ್‌ನಲ್ಲಿ ಬೈಗುಳಗಳ ಸುರಿಮಳೆಗೈದಿದ್ದ ಆರೋಪಿ ಗಿರಧರ್ ರೈ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯಲ್ಲಿ ಕರೆಂಟ್ ಕೈ ಕೊಟ್ಟಾಗ ಆಕ್ರೋಶಗೊಂಡ ಆರೋಪಿ ಗಿರಿಧರ್ ರೈ, ಕಾಂಗ್ರೆಸ್‌ ಪಕ್ಷದ ವೆಬ್‌ಸೈಟ್‌ನಿಂದ ಸಚಿವ ಡಿಕೆಶಿಯವರ ಫೋನ್ ನಂಬರ್ ತೆಗೆದುಕೊಂಡು, ರಾತ್ರಿ ಹೊತ್ತಿನಲ್ಲಿಯೇ ಮನಬಂದಂತೆ ಅಸಭ್ಯ ಬೈಗುಳಗಳ ಸುರಿಮಳೆಗೈದಿದ್ದಾನೆ.
 
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದರಿಂದ, ಪೊಲೀಸರು ಆರೋಪಿಯ ಕರೆಯನ್ನು ಪತ್ತೆ ಮಾಡಿ ಸಳ್ಯದಲ್ಲಿರುವುದು ಖಚಿತಪಡಿಸಿಕೊಂಡು ದಾಳಿ ನಡೆಸಿದ್ದಾರೆ.
 
ಪೊಲೀಸರು ಮನೆಯ ಮೇಲೆ ದಾಳಿ ನಡೆಸುತ್ತಿದ್ದಂತೆ ಆರೋಪಿ ಗಿರಿಧರ್ ರೈ, ಮನೆಯ ಬಾಗಿಲು ಹಾಕಿ ಅಡಗಿಕೊಂಡಿದ್ದಾನೆ. ಮನೆಯ ಮೇಲಿರುವ ಹೆಂಚುಗಳನ್ನು ತೆಗೆದು ಮನೆಯೊಳಗೆ ಪ್ರವೇಶಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
 
ಆರೋಪಿ ಗಿರಿಧರ್ ರೈ ವಿರುದ್ಧ ಸಚಿವರೊಂದಿಗೆ ಅಸಭ್ಯ ವರ್ತನೆ ಮತ್ತು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರು ದಾಖಲಿಸಲಾಗಿದೆ.   

Share this Story:

Follow Webdunia kannada