Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಯನ್ನು ಸಹಪಾಠಿಗಳು ಕಾಂಪಾಸ್‌ನಿಂದ ಇರಿದು ಕೊಂದುಹಾಕಿದರು

ವಿದ್ಯಾರ್ಥಿಯನ್ನು ಸಹಪಾಠಿಗಳು ಕಾಂಪಾಸ್‌ನಿಂದ ಇರಿದು ಕೊಂದುಹಾಕಿದರು
ಕಾಸರಗೋಡು , ಗುರುವಾರ, 20 ನವೆಂಬರ್ 2014 (17:21 IST)
ಮಕ್ಕಳಲ್ಲೂ ಕೂಡ ಕ್ರೌರ್ಯ, ಹಿಂಸಾತ್ಮಕ ಪ್ರವೃತ್ತಿ ಹೆಚ್ಚುತ್ತಿರುವುದಕ್ಕೆ ಕೇರಳದಲ್ಲಿ ಸಂಭವಿಸಿದ ಘಟನೆಯೊಂದು ಅಪ್ಪಟ ಉದಾಹರಣೆಯಾಗಿದೆ.  10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಅವನ ಇಬ್ಬರು ಸಹಪಾಠಿಗಳೇ ಶುಕ್ರವಾರ ರಾತ್ರಿ ಕೊಲೆ ಮಾಡಿದ ಆಘಾತಕಾರಿ ಘಟನೆ ತಡವಾಗಿ ವರದಿಯಾಗಿದೆ.

ಮೂವರು ಶುಕ್ರವಾರ ಶಾಲೆ ಮುಗಿಸಿಕೊಂಡು ವಾಪಸು ಮನೆಗೆ ಬರುವಾಗ ಜಗಳವಾಡತೊಡಗಿದರು.  ಮೃತನನ್ನು ಆರೋಪಿ ವಿದ್ಯಾರ್ಥಿಯೊಬ್ಬ ಕಂಪಾಸ್‌ನಿಂದ ಕಣ್ಣಿನ ಕೆಳಕ್ಕೆ ಇರಿದ.

ನಂತರ ಅವನ ಕಣ್ಣಿನಲ್ಲಿ ಉಂಟಾದ ಗಾಯವನ್ನು ತೊಳೆಯುವ ನೆಪದಲ್ಲಿ ಸಮೀಪದ ಕೊಳಕ್ಕೆ ಕರೆದುಕೊಂಡು ಹೋಗಿ ಅದರಲ್ಲಿ ಮುಳುಗಿಸಿ ಕೊಂದುಹಾಕಿದರು.

ಮೃತ ಬಾಲಕನ ಶವ ಮರುದಿನ ಕೊಳದಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಆರೋಪಿ ಬಾಲಕರಿಬ್ಬರೂ ತಮ್ಮ ಅಪರಾಧದ ಬಗ್ಗೆ ತಪ್ಪೊಪ್ಪಿಕೊಂಡ ಬಳಿಕ ಇಬ್ಬರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಯಿತು. 

Share this Story:

Follow Webdunia kannada