ಪತಿ ತನ್ನ ಪತ್ನಿ ಹಾಗೂ ಮಗುವಿನ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ರಾಜಾಜಿನಗರದ ರಾಮಮಂದಿರದಲ್ಲಿ ಸಂಭವಿಸಿದೆ. ಪತ್ನಿ ಮಂಜುಳಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆಂದು ಶಂಕಿಸಿ ಅವಳನ್ನು ಬರ್ಬರವಾಗಿ ಚಾಕುವಿನಿಂದ ಕೊಲೆ ಮಾಡಿದ್ದಾನೆ.
ವೃತ್ತಿಯಲ್ಲಿ ಟೈಲರ್ ಆಗಿದ್ದ ಪತಿ ಕುಮಾರನಾಯ್ಕ್ ಪತ್ನಿ, ಮಗುವನ್ನು ಕೊಲೆ ಮಾಡಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಕುಮಾರನಾಯ್ಕ್ ಚಾಕು ಸಹಿತ ಠಾಣೆಗೆ ತೆರಳಿ ಶರಣಾದ. ಪತ್ನಿಯ ಅನೈತಿಕ ಸಂಬಂಧದ ಬಗ್ಗೆ ತಾನು ಪತ್ನಿಗೆ ಸಾಕಷ್ಟು ಬಾರಿ ಬುದ್ಧಿ ಹೇಳಿದ್ದರೂ ಅವಳು ತಿದ್ದಿಕೊಳ್ಳಲಿಲ್ಲ.
ಆದ್ದರಿಂದ ಪತ್ನಿಯನ್ನು ಮತ್ತು ಮಗು ಬುದ್ಧಿಮಾಂದ್ಯವಾದ್ದರಿಂದ ಅದನ್ನು ನೋಡಿಕೊಳ್ಳಲು ಯಾರೂ ಇಲ್ಲವೆಂದು ಮಗುವನ್ನೂ ಕೂಡ ಹತ್ಯೆ ಮಾಡಿರುವುದಾಗಿ ಹೇಳಿದ್ದಾನೆ.