Select Your Language

Notifications

webdunia
webdunia
webdunia
webdunia

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ: ತನಿಖೆಗೆ ಆದೇಶಿಸಿದ ಕೋರ್ಟ್

ಆದಾಯಕ್ಕೂ ಮೀರಿ ಆಸ್ತಿ ಗಳಿಕೆ ಆರೋಪ: ತನಿಖೆಗೆ ಆದೇಶಿಸಿದ ಕೋರ್ಟ್
ದಾವಣಗೆರೆ , ಶನಿವಾರ, 2 ಮೇ 2015 (17:41 IST)
ಆದಾಯಕ್ಕೂ ಮೀರಿ ಆಸ್ತಿ ಘಲಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ತನಿಖೆಗೊಳಪಡಿಸುವಂತೆ ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇಂದು ಆದೇಶಿಸಿದೆ. 
 
ರೇಣುಕಾರ್ಯ ಅವರ ವಿರುದ್ಧ ಆದೇಶ ಹೊರಡಿಸಿರುವ ನ್ಯಾಯಾಲಯ, ಜಿಲ್ಲೆಯ ಲೋಕಾಯುಕ್ತ ಎಸ್‌ಪಿ ಅವರಿಗೆ ತನಿಖೆ ನಡೆಸುಂತೆ ಆದೇಶಿಸಿದೆ. ಅಲ್ಲದೆ ಬರುವ ಜೂನ್ 26ರ ಒಳಗೆ ಪ್ರಕರಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಸೂಚಿಸಿದೆ.  
 
ಆರ್‌ಟಿಐ ಕಾರ್ಯಾಕರ್ತ ಗುರುಪಾದಯ್ಯ ಎಂಬುವವರು ರೇಣುಕಾಚಾರ್ಯ ಅವರ ವಿರುದ್ಧ ಇಲ್ಲಿನ ಲೋಕಾಯುಕ್ತ ಕೋರ್ಟ್‌ನಲ್ಲಿ ಕಳೆದ ವಾರ 22 ಪುಟಗಳ ವಿವರ ನೀಡಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪ್ರಕರಣದ ವಿಚಾರಣೆಯನ್ನು ಕೈಗೊಂಡಿದ್ದ ನ್ಯಾಯಾಲಯ, ತನಿಖೆಗೆ ಆದೇಶಿಸಿದೆ. 

Share this Story:

Follow Webdunia kannada