Select Your Language

Notifications

webdunia
webdunia
webdunia
webdunia

ಶಿವಸೇನೆ ಎಂಇಎಸ್‌ಗೆ ತಾಕತ್ತಿದ್ರೆ ನಮ್ಮನ್ನು ತಡೆಯಿಲಿ ಕರವೇ ಸವಾಲ್:

ಶಿವಸೇನೆ ಎಂಇಎಸ್‌ಗೆ ತಾಕತ್ತಿದ್ರೆ ನಮ್ಮನ್ನು ತಡೆಯಿಲಿ ಕರವೇ ಸವಾಲ್:
ಬೆಂಗಳೂರು , ಶುಕ್ರವಾರ, 1 ಆಗಸ್ಟ್ 2014 (16:38 IST)
ರಾಜ್ಯದ 30 ಜಿಲ್ಲೆಗಳಿಂದ ಕರವೇ ಕಾರ್ಯಕರ್ತರು ಯಳ್ಳೂರು ಗ್ರಾಮಕ್ಕೆ ತೆರಳುತ್ತಿದ್ದು, ಎಂಇಎಸ್ ಮತ್ತು ಶಿವಸೇನೆಗೆ ತಾಕತ್ತಿದ್ರೆ ನಮ್ಮನ್ನು ತಡೆಯಲಿ ಎಂದು ಕರವೇ ಅಧ್ಯಕ್ಷ್ಯ ನಾರಾಯಣ್‌ಗೌಡ ಗುಡುಗಿದ್ದಾರೆ.
 
ರಾಜ್ಯದಿಂದ ಸಾವಿರಾರು ಕಾರ್ಯಕರ್ತರು ಯಳ್ಳೂರಿಗೆ ಆಗಮಿಸುತ್ತೇವೆ. ಗ್ರಾಮದಲ್ಲಿ ಕನ್ನಡ ಧ್ವಜ ಹಾರಿಸುತ್ತೇವೆ. ತಾಕತ್ತಿದ್ರೆ ನಮ್ಮನ್ನು ತಡೆದು ನೋಡಿ ಎಂದು ಸವಾಲ್ ಹಾಕಿದ್ದಾರೆ.
 
ಶಿವಸೇನೆ ಮತ್ತು ಎಂಇಎಸ್ ಕರ್ನಾಟಕದ ಗಡಿಭಾಗಗಳಲ್ಲಿ ಪುಂಡಾಟಿಕೆ ನಡೆಸುತ್ತಿದೆ. ಇಂತಹ ಪುಂಡರಿಗೆ ತಕ್ಕ ಪಾಠ ಕಲಿಸುವ ಶಕ್ತಿ ಕನ್ನಡಿಗರಿಗಿದೆ ಎಂದು ಹೇಳಿದ್ದಾರೆ.
 
ಗಡಿಗ್ರಾಮದಲ್ಲಿ ಕನ್ನಡಾಂಬೆಯ ಶವಯಾತ್ರೆ ಮಾಡಿ ಕನ್ನಡ ಧ್ವಜವನ್ನು ಸುಟ್ಟು ಹಾಕುವ ಹೇಯ ಕೃತ್ಯಕ್ಕೆ ಕೈ ಹಾಕಿ ಎಂಇಎಸ್ ಮತ್ತು ಶಿವಸೇನೆ ಹೇಡಿತನ ತೋರಿದೆ. ತಾಕತ್ತಿದ್ರೆ ನಮ್ಮನ್ನು ತಡೆದು ತೋರಿಸಲಿ ಎಂದು ಕರವೇ ಅದ್ಯಕ್ಷ ನಾರಾಯಣ್‌ ಗೌಡ ಕಿಡಿಕಾರಿದ್ದಾರೆ. 

Share this Story:

Follow Webdunia kannada