Select Your Language

Notifications

webdunia
webdunia
webdunia
webdunia

ನಾನೊಬ್ಬ ಹುಟ್ಟಾ ಹೋರಾಟಗಾರ, ಸಂಸತ್ತಿನಲ್ಲಿ ಗುಡುಗುತ್ತೇನೆ: ದೇವೇಗೌಡ

ನಾನೊಬ್ಬ ಹುಟ್ಟಾ ಹೋರಾಟಗಾರ, ಸಂಸತ್ತಿನಲ್ಲಿ ಗುಡುಗುತ್ತೇನೆ: ದೇವೇಗೌಡ
ಬೆಂಗಳೂರು , ಸೋಮವಾರ, 19 ಮೇ 2014 (14:33 IST)
ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿರುವ ತೀರ್ಪಿಗೆ ತಲೆಬಾಗುತ್ತೇನೆ. ಇಬ್ಬರು ಸಂಸದರು ಲೋಕಸಭೆಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಮಾತನಾಡಲೂ ಅವಕಾಶ ಸಿಗುವುದಿಲ್ಲ. ಆದರೂ ನಾನು ಹುಟ್ಟುಹೋರಾಟಗಾರ. ಸಂಸತ್ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ದೇವೇಗೌಡ ಗುಡುಗಿದ್ದಾರೆ. 
 
ಪಕ್ಷವನ್ನು ಅಧಿಕಾರಕ್ಕೆ ತರುವ ಹೊರತು ರಾಜಕೀಯದಿಂದ ನಿವೃತ್ತಿಯಾಗುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಪ್ರಧಾನಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
 
ತಮ್ಮ 82ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಪದ್ಮನಾಭನಗರದಲ್ಲಿರುವ ನಿವಾಸದಲ್ಲಿ ಕುಟುಂಬ ಸದಸ್ಯರೊಂದಿಗೆ ಭಾನುವಾರ ಕೇಕ್ ಕತ್ತರಿಸಿ, ಅದರ ಸವಿ ಸವಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
 
ಜೆಡಿಎಸ್ ಪಕ್ಷವನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿ, ರಾಜ್ಯದ ಅಧಿಕಾರ ಗದ್ದುಗೆ ಹಿಡಿಸುವ ಗುರಿ ಹೊಂದಿದ್ದೇನೆ. ಅಲ್ಲಿಯವರೆಗೆ ರಾಜಕೀಯದಲ್ಲಿ ಸಕ್ರಿಯವಾಗಿರುತ್ತೇನೆ. ಆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಎಚ್.ಡಿ. ದೇವೇಗೌಡ ತಿಳಿಸಿದರು.
 
 
 

Share this Story:

Follow Webdunia kannada