Select Your Language

Notifications

webdunia
webdunia
webdunia
webdunia

ನಾನು ನಾಸ್ತಿಕನಲ್ಲ, ದೇವೇಗೌಡರಷ್ಟು ಮೂಢನಂಬಿಕೆಯೂ ಇಲ್ಲ : ಸಿದ್ದು ಲೇವಡಿ

ನಾನು ನಾಸ್ತಿಕನಲ್ಲ, ದೇವೇಗೌಡರಷ್ಟು ಮೂಢನಂಬಿಕೆಯೂ ಇಲ್ಲ : ಸಿದ್ದು ಲೇವಡಿ
ಕಾರ್ಕಳ , ಬುಧವಾರ, 28 ಜನವರಿ 2015 (19:58 IST)
ನಾನು ನಾಸ್ತಿಕನಲ್ಲ,ಆದರೆ ದೇವೇಗೌಡರಷ್ಟು ಮೂಢನಂಬಿಕೆ ಮತ್ತು ಕಂದಾಚಾರಗಳಲ್ಲಿ ನಂಬಿಕೆ ಇಟ್ಟುಕೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ದೇವೇಗೌಡರಿಗೆ ತಿರುಗೇಟು ನೀಡಿದ್ದಾರೆ.
 
ಬುಧವಾರ ಕಾರ್ಕಳದಲ್ಲಿ ನಡೆಯುತ್ತಿರುವ ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕ ಮಹೋತ್ಸವದಲ್ಲಿ ಭಾಗಿಯಾದ ಬಳಿಕ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಉತ್ತರಿಸಿದರು.
 
ಕಾಂಗ್ರೆಸ್‌ ಪಕ್ಷಕ್ಕೂ ದೇವೇಗೌಡರಿಗೂ ಏನು ಸಂಬಂಧ, ನನ್ನ ರಾಜೀನಾಮೆ ಕೇಳಲು ಅವರು ಯಾರು ಎಂದರು. 
 
ಸಿದ್ದರಾಮಯ್ಯ ತಿರುಪತಿಗೆ ತೆರಳಿದ ಬಗ್ಗೆ ಪ್ರತಿಕ್ರಿಯಿಸಿದ್ದ ದೇವೇಗೌಡರು, 'ನಾಸ್ತಿಕರಾಗಿದ್ದವರು ತಮ್ಮ ತಪ್ಪಿನ ಅರಿವಾಗಿ ತಿರುಪತಿಗೆ ತೆರಳಿದ್ದಾರೆ' ಎಂದು ಹೇಳಿಕೆ  ನೀಡಿದ್ದರು.ಅಲ್ಲದೆ ಸಿದ್ದರಾಮಯ್ಯ  ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದರು.

Share this Story:

Follow Webdunia kannada