ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಸಂಪುಟದಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ್ದೇನೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿಂತ ಸೀನಿಯರ್ ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಮುಂಬರುವ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅಸಮರ್ಥ ಸಚಿವರನ್ನು ಕೈಬಿಡಲಾಗುತ್ತಿದೆ ಎನ್ನುವ ವರದಿಗಳಿಂದ ಆಕ್ರೋಶಗೊಂಡ ಸಚಿವ ಪ್ರಸಾದ್, ನಾನು ಮುಖ್ಯಮಂತ್ರಿಯವರನ್ನು ಕೇಳಿ ಸಚಿವನಾಗಿಲ್ಲ. ನಾನು ತುಂಬಾ ಅನುಭವಿಯಾಗಿದ್ದರಿಂದ ಮಂತ್ರಿಯಾಗಿದ್ದೇನೆ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ.
ನನ್ನಂತಹ ಹಿರಿಯ ಅನುಭವಿ ನಾಯಕ ಸಚಿವ ಸಂಪುಟದಲ್ಲಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗೌರವಿದ್ದಂತೆ. ನನ್ನ ಅನುಭವ ತಳ್ಳಿಹಾಕಲಾಗದು ಎಂದು ಗುಡುಗಿದರು.
ಪ್ರಸ್ತುತ ಸಚಿವ ಸಂಪುಟದಲ್ಲಿರುವ ಕೆಲವು ಅನರ್ಹ ಸಚಿವರನ್ನು ಸಂಪುಟದಿಂದ ಕೈಬಿಡಲಾಗುತ್ತಿದೆ ಎನ್ನುವ ವರದಿಗಳು ಕೆಲ ಸಚಿವರನ್ನು ಕಂಗೆಡಿಸಿವೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.