Select Your Language

Notifications

webdunia
webdunia
webdunia
webdunia

ಸಂಸ್ಥಾನದ ಪರಂಪರೆ ಉಳಿಸುವೆ: ಅರಸ ಯದುವೀರ್

ಸಂಸ್ಥಾನದ ಪರಂಪರೆ ಉಳಿಸುವೆ: ಅರಸ ಯದುವೀರ್
ಮೈಸೂರು , ಗುರುವಾರ, 28 ಮೇ 2015 (17:29 IST)
ಮೈಸೂರು ರಾಜ ಸಂಸ್ಥಾನದ 27ನೇ ಅರಸರಾಗಿ ಇಂದು ಸಿಂಹಾಸನ ಏರಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸಂಸ್ಥಾನದ ಬಗೆಗಿನ ಭಾವವನ್ನು ವ್ಯಕ್ತಪಡಿಸಿದ್ದು, ಅರಸ್ ಮಹಾಸಂಸ್ಥಾನದ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂಬುದಾಗಿ ಭರವಸೆ ನೀಡಿದರು. 
 
ಸಿಂಹಾಸನವೇರಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಮಹಾರಾಜರು, ಮೈಸೂರು ಮಹಾ ಸಂಸ್ಥಾನಕ್ಕೆ ಭವ್ಯವಾದ ಇತಿಹಾಸವಿದೆ. ಮುಂದಿನ ದಿನಗಳಲ್ಲಿ ಈ ಇತಿಹಾಸವನ್ನು ಉಳಿಸಿ ಬೆಳೆಸುವಲ್ಲಿ ಶ್ರಮಿಸಲಿದ್ದೇನೆ. ಅಲ್ಲದೆ  ವಿದೇಶಗಳಿಗೆ ಪ್ರವಾಸ ಕೈಗೊಳ್ಳುವ ಮೂಲಕ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿದ್ದೇನೆ ಎಂದರು.  
 
ಇದೇ ವೇಳೆ, ತಮಗೆ ಹಾರೈಸಿದ ಎಲ್ಲರಿಗೂ ಅಭಿಂದಿಸಿದ ಅವರು, ಭವಿಷ್ಯದಲ್ಲಿ ಇಲ್ಲಿನ ಸಾರ್ವಜನಿಕರ ಸಂಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

Share this Story:

Follow Webdunia kannada