Select Your Language

Notifications

webdunia
webdunia
webdunia
webdunia

ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯವಾದಾಗ ಸಿಎಂ ಆಗ್ತೇನೆ: ಕತ್ತಿ

ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯವಾದಾಗ ಸಿಎಂ ಆಗ್ತೇನೆ: ಕತ್ತಿ
ಬೆಂಗಳೂರು , ಮಂಗಳವಾರ, 16 ಸೆಪ್ಟಂಬರ್ 2014 (18:20 IST)
ನಾನು ಸಿಎಂ ಆಗಬೇಕು ಎಂಬ ಮಾತಿಗೆ ಬದ್ಧ.  6 ಬಾರಿ ಶಾಸಕ, 2 ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ನಾನು ಮುಖ್ಯಮಂತ್ರಿಯಾಗುವಾಗ ಆಗೇ ಆಗ್ತೀನಿ, ಅದು ನನ್ನ ಹಣೆಬರಹದಲ್ಲಿದ್ರೆ ಆಗುತ್ತೆ. ಆಗದಿದ್ರೆ ಮನೇಲಿರ್ತೀನಿ, ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯವಾದಾಗ ಸಿಎಂ ಆಗಬೇಕು. ನಾನು ಸಿಎಂ ಆಗಲೆಂದೇ ರಾಜ್ಯದ ಬೇಡಿಕೆ ಇಟ್ಟಿಲ್ಲ. ಅಭಿವೃದ್ಧಿಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿದ್ದೇನೆ. ನಾನು ಉತ್ತರಕರ್ನಾಟಕಕ್ಕೆ ಸಾಕಷ್ಟು ಅನುದಾನ ತಂದಿದ್ದೇನೆ.
 
ಅತಿವೃಷ್ಟಿ ಪರಿಹಾರಕ್ಕೆ ಕೇಂದ್ರದಿಂದ ಅನುದಾನ ತರುತ್ತೇನೆ ಎಂದು ಉಮೇಶ್ ಕತ್ತಿ ಹೇಳಿದರು. ತಮ್ಮ ವಿರುದ್ಧ ಮಾತನಾಡಿದ ಕೆ.ಎಸ್. ಈಶ್ವರಪ್ಪ ವಿರುದ್ಧ ಉಮೇಶ್ ವಾಗ್ದಾಳಿ ಮಾಡಿದರು.  ಬಾಯಿ ಚಪಲಕ್ಕೆ ಮಾತಾಡೋ ಈಶ್ವರಪ್ಪ ಅವರಿಗೆ ಶಿವಮೊಗ್ಗ ಜನ ತಕ್ಕ ಪಾಠ ಕಲಿಸಿದ್ದಾರೆ. ಬಾಯಿ ಚಪಲಕ್ಕೆ ಮಾತಾಡಿದ್ದಕ್ಕೆ ಬುದ್ಧ ಕಲಿಸಿದ್ದಾರೆ ಎಂದು ಉಮೇಶ್ ಕತ್ತಿ ಹೇಳಿದರು.

Share this Story:

Follow Webdunia kannada