Select Your Language

Notifications

webdunia
webdunia
webdunia
webdunia

ಡಾ.ರಾಜ್‌ಗೆ ಗೌರವ ಸಲ್ಲಿಸಲು ನಾನೂ ಕೂಡ ನೇತ್ರದಾನ ಮಾಡ್ತೇನೆ: ಸಿಎಂ

ಡಾ.ರಾಜ್‌ಗೆ ಗೌರವ ಸಲ್ಲಿಸಲು ನಾನೂ ಕೂಡ ನೇತ್ರದಾನ ಮಾಡ್ತೇನೆ: ಸಿಎಂ
ಬೆಂಗಳೂರು , ಶನಿವಾರ, 29 ನವೆಂಬರ್ 2014 (13:02 IST)
ನನ್ನ ಮರಣಾನಂತರ ನೇತ್ರದಾನ ಮಾಡಬೇಕೆಂದು ನಾನು ಬಯಸುತ್ತೇನೆ. ಡಾ. ರಾಜ್ ಅವರು ನೇತ್ರದಾನ ಮಾಡುವ ಮೂಲಕ ದೃಷ್ಟಿರಹಿತರಿಗೆ ದೃಷ್ಟಿ ನೀಡಿದ್ದಾರೆ. ಆದ್ದರಿಂದ ಡಾ.ರಾಜ್ ನಡೆದ ಹಾದಿಯಲ್ಲಿಯೇ ನಾನೂ ನಡೆದು ನನ್ನ ಮರಣಾನಂತರ ನೇತ್ರದಾನಕ್ಕೆ ಬಯಸಿದ್ದೇನೆ ಎಂದು ಸಿಎಂ ರಾ.ರಾಜ್ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಕನ್ನಡ ಚಿತ್ರರಂಗಕ್ಕೆ ಬೆಳಕು ಕೊಟ್ಟ ಧ್ರುವತಾರೆ ಡಾ.ರಾಜ್. ಮರಣಾನಂತರ ಕತ್ತಲಿನಲ್ಲಿದ್ದವರಿಗೆ ಬೆಳಕು ಕೊಟ್ಟರು. ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ನಾನೂ ಕೂಡ ನೇತ್ರದಾನಕ್ಕೆ ನಿರ್ಧರಿಸಿದ್ದೇನೆ.

ಎಲ್ಲರೂ ನೇತ್ರದಾನ ಮಾಡಿ, ಕಣ್ಣಿಲ್ಲದಿದ್ದವರಿಗೆ ಬೆಳಕು ನೀಡಿ, ಆ ಸಂತೋಷವನ್ನು ಹಂಚಿಕೊಳ್ಳಿ' ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದರು, ನೇತ್ರದಾನ ಮಾಡುವುದು ನಾವು ರಾಜ್ ಕುಮಾರ್ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.
 

Share this Story:

Follow Webdunia kannada