Select Your Language

Notifications

webdunia
webdunia
webdunia
webdunia

ರಾಜ್ಯಕ್ಕೆ ಕೊಡುಗೆ ನೀಡಿಲ್ಲವೆಂಬ ಆರೋಪ ಶುದ್ಧ ಸುಳ್ಳು: ಆಸ್ಕರ್ ಫರ್ನಾಂಡಿಸ್

ರಾಜ್ಯಕ್ಕೆ ಕೊಡುಗೆ ನೀಡಿಲ್ಲವೆಂಬ ಆರೋಪ ಶುದ್ಧ ಸುಳ್ಳು: ಆಸ್ಕರ್ ಫರ್ನಾಂಡಿಸ್
ಬೆಂಗಳೂರು , ಮಂಗಳವಾರ, 31 ಮೇ 2016 (16:11 IST)
ನಾನು ಕರ್ನಾಟಕ ರಾಜ್ಯಕ್ಕಾಗಿ ಯಾವುದೇ ಕೊಡುಗೆ ನೀಡಿಲ್ಲವೆಂಬ ಆರೋಪ ಶುದ್ಧ ಸುಳ್ಳು ಎಂದು ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
 
ನಾನು ರಾಜ್ಯದ ಅಭಿವೃದ್ಧಿಗಾಗಿ ಯಾವುದೇ ಕೆಲಸ ಮಾಡಿಲ್ಲವೆನ್ನುವ ಆರೋಪ ಸರಿಯಲ್ಲ. ದೇಶದಲ್ಲಿ ಪ್ರಪ್ರಥಮ ಬಾರಿಗೆ ಉಡುಪಿಯಲ್ಲಿ ಎಸ್‌ಟಿಡಿ ಮತ್ತು ದೂರದರ್ಶನವನ್ನು ಆರಂಭಿಸಿದ್ದೇವೆ. ಕೊಂಕಣ ರೈಲ್ವೆ, ಎಮ್‌ಆರ್‌ಎಲ್‌ಪಿ ಮತ್ತು ರಸಗೊಬ್ಬರ ಕಾರ್ಖಾನೆ ಸೇರಿದಂತೆ ಹೈದ್ರಾಬಾದ್ ಕರ್ನಾಟಕದಲ್ಲೂ ನನ್ನು ಕೊಡುಗೆ ಅಪಾರವಾಗಿದೆ ಎಂದು ಹೇಳಿದ್ದಾರೆ.
 
ರಾಜ್ಯದ ನೆಲ, ಜಲ ಮತ್ತು ಭಾಷೆಯ ಕುರಿತತಂತೆ ನಾನು ಸೇವೆಯನ್ನು ಸಲ್ಲಿಸಿದ್ದೇನೆ. ಕರ್ನಾಟಕದ ಶಾಸ್ತ್ರೀಯ ಸ್ಥಾನಮಾನದಲ್ಲೂ ನನ್ನ ಕೊಡುಗೆ ಅಪಾರವಾಗಿದೆ. ಸುಖಾಸುಮ್ಮನೆ ರಾಜ್ಯಕ್ಕೆ ನನ್ನ ಕೊಡುಗೆ ಇಲ್ಲ ಎಂದು ಆರೋಪಿಸುವುದು ಸರಿಯಲ್ಲ ಎಂದರು. 
 
ಕರ್ನಾಟಕ ರಾಜ್ಯದಿಂದ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಕನ್ನಡಿಗರನ್ನೆ ಕಣಕ್ಕಿಳಿಸಿದೆ. ಬೇರೆ ಪಕ್ಷಗಳ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಹೊರ ರಾಜ್ಯದವರನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡುವುದರಲ್ಲಿ ತಪ್ಪಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಅಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.


ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರತಿಭಾ ಕೊಲೆ ಪ್ರಕರಣ: ಆರೋಪಿ ಶಿವುಕುಮಾರ್‌ಗೆ ಜೀವಾವಧಿ ಶಿಕ್ಷೆ ಖಾಯಂ