Select Your Language

Notifications

webdunia
webdunia
webdunia
webdunia

ಪೇಜಾವರ ಶ್ರೀಗಳು ದಲಿತರ ಪರವಾಗಿದ್ದಾರೆ, ಅವರ ಮೇಲೆ ಅಪಾರ ಗೌರವವಿದೆ: ಎಚ್‌.ಆಂಜನೇಯ

ಪೇಜಾವರ ಶ್ರೀಗಳು ದಲಿತರ ಪರವಾಗಿದ್ದಾರೆ, ಅವರ ಮೇಲೆ ಅಪಾರ ಗೌರವವಿದೆ: ಎಚ್‌.ಆಂಜನೇಯ
ಮಂಗಳೂರು , ಮಂಗಳವಾರ, 17 ಜನವರಿ 2017 (15:01 IST)
ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅವರ ಮೇಲೆ ನನಗೆ ಅಪಾರ ಗೌರವ ಇದೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು.
 
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ದಲಿತರ ಪರವಾಗಿದ್ದಾರೆ. ಅವರು ದಲಿತ ಕೇರಿಗಳಿಗೆ ಹೋಗುತ್ತಾರೆ. ಸಾಮೂಹಿಕ ಭೋಜನದಲ್ಲಿಯೂ ಭಾಗಿಯಾಗುತ್ತಾರೆ. ಹೀಗಾಗಿ ನನಗೆ ಅವರ ಮೇಲೆ ಅಪಾರ ಗೌರವ ಇದೆ ಎಂದರು. 
 
ಇದರಿಂದಾಗಿಯೇ ನಾನು ಅವರ ಮಠಕ್ಕೆ ಹೋಗುತ್ತೇನೆ. ನಾನು ದೇವಸ್ಥಾನಗಳಿಗೆ ಹೋಗದೆ ಇದ್ದರೂ ಬಹುತೇಕ ಮಠಗಳಿಗೆ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
 
ದೇವಸ್ಥಾನದಲ್ಲಿ ದೇವರು ಮಾತನಾಡುವುದಿಲ್ಲ. ಆದರೆ, ಮಠಗಳಲ್ಲಿ ಸ್ವಾಮೀಜಿಗಳು ಮಾತನಾಡುತ್ತಾರೆ. ಹೀಗಾಗಿ ದೇವಸ್ಥಾನಗಳ ಬದಲಿಗೆ ಮಠಗಳಿಗೆ ಹೆಚ್ಚು ಭೇಟಿ ನೀಡುತ್ತೇನೆ. ಅದರಂತೆಯೇ ಉಡುಪಿಯ ಪೇಜಾವರ ಮಠಕ್ಕೆ ಭೇಟಿ ನೀಡಿ ಊಟ ಮಾಡಿ ಬಂದಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ತಿಳಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

5ನೇ ತರಗತಿಗೆ ಶಾಲೆ ಬಿಟ್ಟ 94 ವರ್ಷದ ಅಜ್ಜನ ಸಂಬಳ 21ಕೋಟಿ