ಜಿ.ಪಂ. ತಾ.ಪಂ. ಚುನಾವಣೆಯಲ್ಲಿ ಮಾಜಿ ಚಿತ್ರನಟಿ ಲೀಲಾವತಿ ಮತ ಚಲಾಯಿಸಿದರು. ಈ ಬಾರಿ ಮತ ಚಲಾಯಿಸುವ ನಂಬಿಕೆ ಇರಲಿಲ್ಲ. ದೇವರು, ಅಭಿಮಾನಿಗಳ ಆಶೀರ್ವಾದಿಂದ ಬದುಕುಳಿದೆ ಎಂದು ಲೀಲಾವತಿ ಉದ್ಗರಿಸಿದರು.
ಲೀಲಾವತಿ ಪುತ್ರ ವಿನೋದ್ ಜತೆ ನೆಲಮಂಗಲದ ಮೈಲನಹಳ್ಳಿ ಶಾಲೆಯಲ್ಲಿ ಮತ ಚಲಾಯಿಸಿದರು. ಲೀಲಾವತಿ ಅವರನ್ನು ಅಸ್ವಸ್ಥತೆಯಿಂದ ಗಂಭೀರಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಅವರು ಮತಗಟ್ಟೆಗೆ ತೆರಳಿ ಮತಚಲಾಯಿಸುವಾಗ ಅವರು ಮೇಲಿನಂತೆ ಉದ್ಗರಿಸಿದರು. ಈ ಸಂದರ್ಭದಲ್ಲಿ ವೀರ ಯೋಧ ಹನುಮಂತಪ್ಪ ಅವರನ್ನು ನೆನೆದು ಸಂತಾಪ ಸೂಚಿಸಿದರು.
ವಿನೋದ್ ಮಾತನಾಡುತ್ತಾ ಯಾರೇ ಗೆಲ್ಲಲಿ, ಯಾರೇ ಸೋಲಲಿ, ನಿಮ್ಮ ಮತವನ್ನು ಚಲಾಯಿಸಿ. ಯಾರಿಗೆ ಮತ ಚಲಾಯಿಸಿದ್ದರೂ ನಿಮ್ಮ ಹಕ್ಕನ್ನು ಕೇಳಿ ಪಡೆಯುವ ಅಧಿಕಾರ ನಿಮಗಿದೆ ಎಂದು ಜನರಿಗೆ ಮನವರಿಕೆ ಮಾಡಿದರು.