ಬೆಂಗಳೂರು: ಸಿಎಂ ವಿರುದ್ಧ ಆರೋಪಕ್ಕೆ ತಾವು ಈಗಲೂ ಬದ್ಧವಾಗಿರುವುದಾಗಿ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. ಬಿಡಿಎ, ಬಿಬಿಎಂಪಿಯಿಂದ ಸರ್ಕಾರ ಹಣ ವಸೂಲಿ ಮಾಡುತ್ತಿದೆ. ಸಿಎಂ ಹಫ್ತಾ ವಸೂಲಿ ಮಾಡ್ತಿದ್ದಾರೆ ಎಂದು ಸದಾನಂದ ಗೌಡ ಅವರು ಆರೋಪಿಸಿದ್ದರು. ' ಸಿಎಂ ವಿರುದ್ಧ ಆರೋಪಗಳಿಗೆ ನನ್ನ ಬಳಿ ದಾಖಲೆಗಳಿವೆ. ಸಿಎಂ ನನ್ನ ಮೇಲೆ ಕ್ರಿಮಿನಲ್ ಕೇಸ್ ಹಾಕ್ತೇನೆ ಎಂದು ಹೇಳಿದ್ದರು.
ಅವರು ಬೇಕಾದ್ರೆ ಕೇಸು ಹಾಕಲಿ, ನಾನು ಎದುರಿಸಲು ಸಿದ್ದನಿದ್ದೇನೆ' ಎಂದು ನುಡಿದರು. ಈ ನಡುವೆ ಸಿಎಂ ವಿರುದ್ಧ ಆರೋಪಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆರೋಪಗಳಿದ್ದರೆ ದಾಖಲೆಗಳನ್ನು ಹಾಜರುಪಡಿಸುವಂತೆ ಅವರು ಒತ್ತಾಯಿಸಿದರು.
ಎಂ ಸಿದ್ದರಾಮಯ್ಯ ಅವರು ಹಫ್ತಾ ವಸೂಲಿ ಮಾಡ್ತಿದ್ದಾರೆ. ಚುನಾವಣೆ ವೆಚ್ಚದ ನೆಪದಲ್ಲಿ ಬಿಬಿಎಂಪಿ ಎಂಜಿನಿಯರುಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಸದಾನಂದ ಗೌಡ ಗಂಭೀರ ಆರೋಪ ಮಾಡಿದ್ದರು. ಬಿಬಿಎಂಪಿ ಯೋಜನೆಗೆ 400 ಕೋಟಿ ಹಣವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ. 400 ಕೋಟಿ ರೂ. ರಿಲೀಸ್ಗೆ ಶೇ. 30ರಷ್ಟು ಹಫ್ತಾ ವಸೂಲಿಯನ್ನು ಮಾಡ್ತಿದ್ದಾರೆ ಎಂದು ಸದಾನಂದ ಗೌಡ ವಾಗ್ದಾಳಿ ಮಾಡಿದ್ದರು.
ಶೇ. 30ರಷ್ಟು ಹಣವನ್ನು ಎಂಜಿನಿಯರ್ಗಳಿಂದ ವಸೂಲಿ ಮಾಡಿದ್ದಾರೆ ಎಂದು ಸದಾನಂದಗೌಡರು ಆರೋಪಿಸಿದ್ದರು. ಹಫ್ತಾ ವಸೂಲಿ ಪರ್ಸಂಟೇಜ್ ಲೆಕ್ಕದಲ್ಲಿ ನಡೀತಾ ಇದೆ ಎಂದೂ ಅವರು ಟೀಕಿಸಿದ್ದರು.