Select Your Language

Notifications

webdunia
webdunia
webdunia
webdunia

ನಾನು ಕೆಮ್ಮನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ: ಕೇಜ್ರಿವಾಲ್

ನಾನು ಕೆಮ್ಮನಿಂದ ಸಂಪೂರ್ಣ ಗುಣಮುಖನಾಗಿದ್ದೇನೆ: ಕೇಜ್ರಿವಾಲ್
ಬೆಂಗಳೂರು , ಸೋಮವಾರ, 16 ಮಾರ್ಚ್ 2015 (15:06 IST)
ಕೆಮ್ಮು ಹಾಗೂ ಮದುಮೇಹ ಚಿಕಿತ್ಸೆಗಾಗಿ ರಾಜ್ಯ ರಾಜಧಾನಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದು, ನಾನು ಸಂಪೂರ್ಣವಾಗಿ ಗುಣುಮುಖನಾಗಿದ್ದೇನೆ ಎಂದು ತಿಳಿಸಿದ್ದಾರೆ.  
 
ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಅವರು, ನಾನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಏಕೆಂದರೆ ನನಗೆ ಕೆಮ್ಮ ಸಂಪೂರ್ಣವಾಗಿ ವಾಸಿಯಾಗಿದ್ದು, ಮದುಮೇಹವೂ ಕಡಿಮೆಯಾಗಿದೆ. ಅಲ್ಲದೆ ನಾನು ಮತ್ತೆ ನನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಉತ್ಸುಕನಾಗಿದ್ದೇನೆ. ಆಸ್ಪತ್ರೆಯ ಸ್ಥಾಪಕ ಸೀತಾರಾಂ ಅವರಿಗೆ ನನ್ನ ಅಭಿನಂದನೆ ಎಂದಿದ್ದಾರೆ. 
 
ಕೇಜ್ರಿವಾಲ್, ಕಳೆದ 10 ದಿನಗಳ ಹಿಂದೆ ಕೆಮ್ಮು ಹಾಗೂ ಮದುಮೇದ ಚಿಕಿತ್ಸೆಗಾಗಿ ನಗರದ ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪ್ರಸ್ತುತ ಚಿಕಿತ್ಸೆಯ ಅವಧಿ ಪೂರ್ಣಗೊಂಡಿದ್ದು, ತಮ್ಮ ಸ್ವ ರಾಜ್ಯ ದೆಹಲಿಗೆ ಹಿಂದಿರುಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಈ ರೀತಿಯಾಗಿ ಟ್ವೀಟ್ ಮಾಡಿದ್ದಾರೆ. 

Share this Story:

Follow Webdunia kannada