Webdunia - Bharat's app for daily news and videos

Install App

ಸಾಲ ತೀರಿಸದೆ ಮನೆ ಬಿಟ್ಟು ಪರಾರಿಯಾದ ಪತಿರಾಯ: ಪತ್ನಿ ಆತ್ಮಹತ್ಯೆಗೆ ಯತ್ನ

Webdunia
ಸೋಮವಾರ, 5 ಅಕ್ಟೋಬರ್ 2015 (14:31 IST)
ಮೂರು ಲಕ್ಷ ಸಾಲ ಪಾವತಿಸದೆ ಪತಿ ಮನೆ ಬಿಟ್ಟು ಹೋದ ಎಂಬ ಕಾರಣದಿಂದ ಮನನೊಂದ ಮಹಿಳೆಯೋರ್ವಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ರಾಯಪುರ ಎಂಬ ಗ್ರಾಮದಲ್ಲಿ ನಡೆದಿದೆ.  
 
ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಕುಮಾರಿ ಎಂದು ಹೇಳಲಾಗಿದ್ದು, ಈಕೆ ಇದೇ ಗ್ರಾಮದ ನಿವಾಸಿಯಾಗಿದ್ದಾಳೆ. ಅಲ್ಲದೆ ಸ್ತ್ರೀಶಕ್ತಿ ಸ್ವಸಹಾಯ ಸಂಘದಲ್ಲಿ ಸದಸ್ಯೆಯಾಗಿದ್ದ ಈಕೆ, ಕಂತಿನ ಆಧಾರದಲ್ಲಿ 3 ಲಕ್ಷ ಸಾಲ ಪಡೆದಿದ್ದಳು. ಆದರೆ ಆ ಹಣವನ್ನು ಮರು ಪಾವತಿಸುವಂತೆ ಸಂಘದ ಇತರೆ ಸದಸ್ಯೆಯರು ಮಹಿಳೆಗೆ ತೀವ್ರ ಹಿಂಸೆ ನೀಡುತ್ತಿದ್ದರು. ಇದೇ ವೇಳೆ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದೆ ಮೂರು ತಿಂಗಳ ಹಿಂದೆ ಆಕೆಯ ಪತಿ ದೇವರಾಜು ಮನೆ ತೊರೆದಿದ್ದ. ಇದರಿಂದ ಕಂಗಾಲಾದ ಪತ್ನಿ ಕುಮಾರಿ, ಕಳೆದ ಒಂದು ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. 
 
ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿರುವ ಆಕೆಯನ್ನು ಆಕನ ಅಕ್ಕ ನೋಡಿಕೊಳ್ಳುತ್ತಿದ್ದಾರೆ. ಸಾಲದ ಜೊತೆಗೆ ಪ್ರಸ್ತುತ ಆಸ್ಪತ್ರೆಯ ಖರ್ಚೂ ಕೂಡ ಹೆಗಲ ಮೇಲೆ ಬಿದ್ದಿದ್ದು, ಈಕೆಯ ಕುಟುಂಬ ಸಾಲಬಾಧೆಯಿಂದ ಮತ್ತಷ್ಟು ನರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.  
 
ಇನ್ನು ತಮ್ಮ ಮಗ ಮನೆಬಿಟ್ಟು ಹೋಗಲು ಆತನ ಪತ್ನಿ ಕುಮಾರಿಯೇ ಕಾರಣಳಾಗಿದ್ದು, ಆತನೊಂದಿಗೆ ಆಗಾಗ ಜಗಳವಾಡುತ್ತಿದ್ದಳು ಎಂದು ಸೊಸೆ ಕುಮಾರಿಯನ್ನು ಅವರ ಅತ್ತೆ ಮತ್ತು ಮಾವ ದೂರುತ್ತಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ