Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ

ಅನೈತಿಕ ಸಂಬಂಧದ ಶಂಕೆ: ಪತ್ನಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಪತಿ
ಹಿರಿಯೂರು , ಭಾನುವಾರ, 29 ಮಾರ್ಚ್ 2015 (10:49 IST)
ಬೆಳಘಟ್ಟದಲ್ಲಿ ಪತ್ನಿಯನ್ನು ಕೊಂದು ಪತಿ ನೇಣಿಗೆ ಶರಣಾದ ಘಟನೆ ಸಂಭವಿಸಿದೆ. ಪತ್ನಿಯ ಅನೈತಿಕ ಸಂಬಂಧವನ್ನು ಶಂಕಿಸಿ  ಪತಿ ಕರಿಯಪ್ಪ ತನ್ನ ಪತ್ನಿಯನ್ನು ಕೊಂದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ. ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಮನೆಯಲ್ಲಿ ಪತಿ ಮಮತಾಳ ಕತ್ತುಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ನಂತರ ಗುಡಿಹಳ್ಳಿ ಜಮೀನಿನಲ್ಲಿ ತಾನೂ ನೇಣಿಗೆ ಕುತ್ತಿಗೆಯೊಡ್ಡಿ ಕರಿಯಪ್ಪ ಆತ್ಮಹತ್ಯೆ ಮಾಡಿಕೊಂಡ.

 ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಕರಿಯಪ್ಪ ಶಂಕಿಸಿದ್ದ. ಇದರಿಂದ ತೀವ್ರ ಕ್ರುದ್ಧನಾಗಿದ್ದ ಕರಿಯಪ್ಪ ಜೀವನದಲ್ಲಿ ಜಿಗುಪ್ಸೆ ಹೊಂದಿ ಪತ್ನಿಯನ್ನು ಕೊ ಲೆ ಮಾಡಲು ನಿಶ್ಚಯಿಸಿದ. ಹರಿತವಾದ ಆಯುಧದಿಂದ ಪತ್ನಿಯ ಕತ್ತನ್ನು ಕೊಯ್ದು ಕೊಲೆ ಮಾಡಿದ.

ಇನ್ನು ತಾನೂ ಬದುಕಿರುವುದು ಬೇಡವೆಂದು ನಿಶ್ಚಿಯಿಸಿ ಆತ್ಮಹತ್ಯೆಗೆ ಶರಣಾದ. ಬೆಳಘಟ್ಟ ಡಿವೈಎಸ್‌ಪಿ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

Share this Story:

Follow Webdunia kannada