Select Your Language

Notifications

webdunia
webdunia
webdunia
webdunia

ಪತಿ ಆರೋಪಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ: ಗಣಪತಿ ಪತ್ನಿ ಪಾವನಾ

ಪತಿ ಆರೋಪಿಸಿದ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ: ಗಣಪತಿ ಪತ್ನಿ ಪಾವನಾ
ಬೆಂಗಳೂರು , ಸೋಮವಾರ, 11 ಜುಲೈ 2016 (17:08 IST)
ಮಂಗಳೂರು ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಆತ್ಮಹತ್ಯೆಗೂ ಮುಂಚೆ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಿ ಎಂದು ಎಂ.ಕೆ.ಗಣಪತಿ ಪತ್ನಿ ಪಾವನಾ ಒತ್ತಾಯಿಸಿದ್ದಾರೆ.
 
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಕೆ.ಗಣಪತಿ ಪತ್ನಿ ಪಾವನಾ, ನನ್ನ ಪತಿಯ ಸಾವಿನ ಸುದ್ದಿ ನನಗೆ ನಂಬಲು ಸಾಧ್ಯವಾಗಲಿಲ್ಲ. ಅವರ ಸಾವಿನ ಸುದ್ದಿ ತಿಳಿಯುತ್ತಲೆ ಮಂಗಳೂರಿನಿಂದ ಮಡಿಕೇರಿಯತ್ತ ಹೊರಟೆವು. ನಮ್ಮನ್ನು ಯಾವ ಅಧಿಕಾರಿಗಳು ಮಾತನಾಡಿಸಲಿಲ್ಲ. ನನ್ನ ಹೇಳಿಕೆಯನ್ನು ಪಡೆದುಕೊಂಡರು. ಆದರೆ, ಇದೀಗ ನನ್ನ ಹೇಳಿಕೆಗಳೇ ಮಾಯವಾಗಿದೆ ಎಂದು ಆರೋಪಿಸಿದ್ದಾರೆ.
 
ನನ್ನ ಹೇಳಿಕೆಗಳನ್ನು ಪೊಲೀಸರೊಬ್ಬರು ದಾಖಲಿಸಿಕೊಳ್ಳುತ್ತಿದ್ದರು. ಆದರೆ, ಅವರ ಯಾರು ಎಂದು ಮರೆತು ಹೋಗಿದ್ದೇನೆ. ನನ್ನ ಸಂಸಾರದಲ್ಲಿ ಯಾವುದೇ ತೊಂದರೆಗಳಿರಲಿಲ್ಲ. ಅತ್ತೆ, ಮಾವನವರೊಂದಿಗೆ ಚೆನ್ನಾಗೆ ಇದ್ದೇವು. ನನ್ನ ಪತಿ ನನ್ನ ಬಳಿ ಎಲ್ಲ ವಿಷಯವನ್ನು ಹೇಳಿಕೊಳ್ಳುತ್ತಿದ್ದರು ಎಂದು ತಿಳಿಸಿದ್ದಾರೆ.
 
ನನ್ನ ಪತಿ ಆತ್ಮಹತ್ಯೆಗೂ ಮುಂಚೆ ನೀಡಿರುವ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಿ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಜನರು ಸ್ಪಂದಿಸಬೇಕು. ಗಣಪತಿ ಅವರು ಉಲ್ಲೇಖಿಸಿರುವವರನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸ್ ಉಗ್ರರು ನರಕದ ನಾಯಿಗಳು, 100 ತುಂಡಾಗಿಸುತ್ತೇವೆ: ಓವೈಸಿ