Webdunia - Bharat's app for daily news and videos

Install App

ರಮ್ಯಾ ಕಾಲ್ಗುಣ ಸರಿಯಿಲ್ಲ, ನೂರಾರು ರೈತರ ಆತ್ಮಹತ್ಯೆ : ಕುಮಾರಸ್ವಾಮಿ ಟೀಕೆ

Webdunia
ಮಂಗಳವಾರ, 16 ಫೆಬ್ರವರಿ 2016 (17:37 IST)
ರಮ್ಯಾ ಕಾಲ್ಗುಣ ಸರಿಯಿಲ್ಲ. ಅವರು ಮಂಡ್ಯಕ್ಕೆ ಕಾಲಿಟ್ಟ ನಂತರ ನೂರಾರು ರೈತರು ಆತ್ಮಹತ್ಯೆಯ ಹಾದಿ ಹಿಡಿದರು. ಇದು ರಮ್ಯಾ ಮಂಡ್ಯದ ಜನತೆಗೆ ಕೊಟ್ಟ ಬಳುವಳಿ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಮಂಡ್ಯದ ಕೆ.ಆರ್. ಪೇಟೆಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಚುನಾವಣೆ ಸಂದರ್ಭದಲ್ಲಿ ರೈತರ ಮನೆ ಬಾಗಿಲಿಗೆ ಬರುವ ಅವರು ಬೇರೆ ಸಂದರ್ಭಗಳಲ್ಲಿ ಏಕೆ ಬರುವುದಿಲ್ಲ ಎಂದು ಪ್ರಶ್ನಿಸಿದರು.

ರಮ್ಯಾ ಸಂಸದೆಯಾಗಿ ಆಯ್ಕೆಯಾದ ಮೇಲೆ ರೈತರು ಆತ್ಮಹತ್ಯೆಯ ಮಾರ್ಗಕ್ಕೆ ಶರಣಾದರು. ರಮ್ಯಾ ಮಂಡ್ಯದ ರೈತರ ಅಭಿವೃದ್ಧಿಗೆ ಏನನ್ನೂ ಮಾಡದಿರುವುದು ಇದಕ್ಕೆ ಕಾರಣ ಎಂದು ಕುಮಾರಸ್ವಾಮಿ ಟೀಕಿಸಿದರು. 
 
ಸದಾ ಒಂದಿಲ್ಲೊಂದು ಸುದ್ದಿ ಮಾಡುತ್ತಾ ಗಮನಸೆಳೆಯುವ ಕುಮಾರಸ್ವಾಮಿ ಸಿಎಂ ಕಟ್ಟಿಕೊಳ್ಳುತ್ತಿದ್ದ ದುಬಾರಿ ದರದ ವಾಚ್ ಕುರಿತು ತಕರಾರು ತೆಗೆದಿದ್ದು, ದೊಡ್ಡ ವಿವಾದವಾಗಿ ಪರಿಣಮಿಸಿತ್ತು. ಅದಾದ ಬಳಿಕ ಸಿಎಂ ಸಾಮಾನ್ಯ ದರ್ಜೆಯ ವಾಚ್ ಧರಿಸಲಾರಂಭಿಸಿದರು. ಕನ್ನಡಕವೂ ಕೂಡ ಬದಲಾಗಿತ್ತು. 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments