ಬೆಂಗಳೂರಿನ ಹುಳಿಮಾವು ಕೆರೆಯ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ವಾಲ್ ಮಾರ್ಕ್ ಅಪಾರ್ಟ್ಮೆಂಟ್ ಮಾಲೀಕರು ಈ ಒತ್ತುವರಿ ಮಾಡಿದ್ದರೆಂದು ಆರೋಪಿಸಲಾಗಿದೆ. ಎಸಿ ನಾಗರಾಜ್,ದಕ್ಷಿಣ ತಹಸೀಲ್ದಾರ್ ಮಮತಾ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಯಲಿದೆ.
ವಾಲ್ಮಾರ್ಕ್ 15 ಕುಂಟೆ ಒತ್ತುವರಿ ಮಾಡಿಕೊಂಡು ಶೆಟ್ ನಿರ್ಮಿಸಿದ್ದು, ಕಾಂಪೌಂಡ್ಗಳನ್ನು ನಿರ್ಮಿಸಿದ್ದು,. ತಮಗೆ 2 ದಿನಗಳ ಕಾಲಾವಕಾಶ ನೀಡಿದರೆ ತೆರವು ಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
18 ಕುಂಟೆ ಜಾಗ 45 ಕೋಟಿ ರೂ.ನಷ್ಟು ಬೆಲೆಬಾಳುತ್ತಿದ್ದು, ಒತ್ತುವರಿ ಮಾಡಲೇಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಬೆಂಗಳೂರು ನಗರ ಡಿ.ಸಿ ಶಂಕರ್ ಹೇಳಿದ್ದಾರೆ. ಅಪಾರ್ಟ್ಮೆಂಟ್ ಸಂಬಂಧಿತ ದಾಖಲೆಗಳನ್ನು ನೀಡುವಂತೆ ಅವರು ಸೂಚಿಸಿದ್ದಾರೆ.