Select Your Language

Notifications

webdunia
webdunia
webdunia
webdunia

ಹುಚ್ಚ ವೆಂಕಟ್‌ಗೆ ಸಿಜೋಪ್ರೀನಿಯಾ ಕಾಯಿಲೆ: ಕೋರ್ಟ್‌ನಲ್ಲಿ ವಕೀಲರ ಹೇಳಿಕೆ

ಹುಚ್ಚ ವೆಂಕಟ್‌ಗೆ ಸಿಜೋಪ್ರೀನಿಯಾ ಕಾಯಿಲೆ:  ಕೋರ್ಟ್‌ನಲ್ಲಿ ವಕೀಲರ ಹೇಳಿಕೆ
ಬೆಂಗಳೂರು , ಶುಕ್ರವಾರ, 20 ನವೆಂಬರ್ 2015 (16:31 IST)
ಡಾ.ಬಿ.ಆರ್. ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹುಚ್ಚ ವೆಂಕಟ್ ಅವರನ್ನು  ಬೆಂಗಳೂರಿನ 17ನೇ ಸಿಸಿಎಚ್ ಕೋರ್ಟ್‌ನಲ್ಲಿ ಹಾಜರುಪಡಿಸಿದಾಗ ಅವರ ಪರ ವಕಾಲತ್ತು ವಹಿಸಿದ ವಕೀಲರು ಹುಚ್ಚ ವೆಂಕಟ್‌ಗೆ ಸಿಜೋಪ್ರೀನಿಯಾ ಕಾಯಿಲೆಯಿದೆ ಎಂದು ನ್ಯಾಯಾಲಯದಲ್ಲಿ  ಹೇಳಿಕೆ ನೀಡಿದ್ದಾರೆ.

 ನ್ಯಾಯಾಧೀಶರು ಹುಚ್ಚ ವೆಂಕಟ್‌ನನ್ನು ಏನಾದರೂ ಮಾನಸಿಕ ಕಾಯಿಲೆಯಿದೆಯೇ ಎಂದು ಕೇಳಿದಾಗ ಏನೂ ಇಲ್ಲ ಎಂದು ಹೇಳಿದ್ದ ವೆಂಕಟ್ ನಂತರ ಸ್ವಲ್ಪ ಆರೋಗ್ಯ ಸಮಸ್ಯೆಯಿದೆ ಎಂದು ಹೇಳಿದ್ದ.  ಅವಶ್ಯಕತೆ ಇದ್ದರೆ ವೈದ್ಯಕೀಯ ಚಿಕಿತ್ಸೆ ಕೊಡಿಸಿ ಎಂದು ಜೈಲು ಸಿಬ್ಬಂದಿಗೆ ಜಡ್ಜ್ ಹಾಜವಗೋಲ್ ಸೂಚಿಸಿದರು.

 ಅಂಧ ಅಭಿಮಾನಿಯೊಬ್ಬ ಹುಚ್ಚ ವೆಂಕಟ್‌ಗೆ ಸಾಂತ್ವನ ಹೇಳುತ್ತಿದ್ದ.  ಹುಚ್ಚ ವೆಂಕಟ್ ಸೋದರಿ ಕೋರ್ಟ್‌ನಲ್ಲಿ ತನ್ನ ಸೋದರನ ಸ್ಥಿತಿಯನ್ನು ಕಂಡು ಕಣ್ಣೀರು ಹಾಕಿದ್ದಳು.  ಹುಚ್ಚ ವೆಂಕಟ್‌ಗೆ ಶ್ಯೂರಿಟಿ ನೀಡಲು ಸಹೋದರಿ ಕೋರ್ಟ್‌ಗೆ ಬಂದಿದ್ದಳು. 

Share this Story:

Follow Webdunia kannada