Webdunia - Bharat's app for daily news and videos

Install App

ಶ್ಯೂರಿಟಿ ನೀಡುತ್ತಿಲ್ಲವೆಂದು ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡ ಹುಚ್ಚ ವೆಂಕಟ್

Webdunia
ಸೋಮವಾರ, 30 ನವೆಂಬರ್ 2015 (10:58 IST)
ಬಂಧಿತ ನಟ ನಿರ್ದೇಶಕ ಹುಚ್ಚ ವೆಂಕಟ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ತನಗೆ ಶ್ಯೂರಿಟಿ ನೀಡುತ್ತಿಲ್ಲವೆಂದು ಹುಚ್ಚ ವೆಂಕಟ್  ಆಕ್ರೋಶಗೊಂಡು ಜೈಲಿನ ಗೋಡೆಗೆ, ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡಿದ್ದರಿಂದ ತಲೆಗೆ ಗಾಯವಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಿಬ್ಬಂದಿ ಕರೆದೊಯ್ದಾಗ,  ಜೈಲಿನ ಆಸ್ಪತ್ರೆಯಲ್ಲಿ ಗಾಯಾಳು ಹುಚ್ಚ ವೆಂಕಟ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಚಿಕಿತ್ಸೆ ಬಳಿಕ ಹುಚ್ಚ ವೆಂಕಟ್ ಜೈಲಿನ ಕೋಣೆಗೆ ವಾಪಸಾಗಿದ್ದಾನೆ.  ನಿನ್ನೆ ಸಂಜೆಯಿಂದ ಹುಚ್ಚ ವೆಂಕಟ್ ಕಿರುಚಾಡುತ್ತಿದ್ದನೆಂದು ತಿಳಿದುಬಂದಿದೆ. ಹುಚ್ಚ ವೆಂಕಟ್‌ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ ಅವನ ಬಿಡುಗಡೆಗೆ ನೀಡಬೇಕಾದ ಶ್ಯೂರಿಟಿ ಇನ್ನೂ ಸಿಕ್ಕಿರಲಿಲ್ಲ.

 ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹುಚ್ಚ ವೆಂಕಟ್‌ನನ್ನು ಬಂಧಿಸಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಕೋರ್ಟ್ ಅವನಿಗೆ ಜಾಮೀನು ನೀಡಿದ್ದರೂ ಅವನಿಗೆ ಶ್ಯೂರಿಟಿ ಸಿಕ್ಕಿರಲಿಲ್ಲ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments