ಬಂಧಿತ ನಟ ನಿರ್ದೇಶಕ ಹುಚ್ಚ ವೆಂಕಟ್ ತಲೆಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ತನಗೆ ಶ್ಯೂರಿಟಿ ನೀಡುತ್ತಿಲ್ಲವೆಂದು ಹುಚ್ಚ ವೆಂಕಟ್ ಆಕ್ರೋಶಗೊಂಡು ಜೈಲಿನ ಗೋಡೆಗೆ, ಕಬ್ಬಿಣದ ಸರಳಿಗೆ ತಲೆ ಚಚ್ಚಿಕೊಂಡಿದ್ದರಿಂದ ತಲೆಗೆ ಗಾಯವಾಗಿದೆ. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ಸಿಬ್ಬಂದಿ ಕರೆದೊಯ್ದಾಗ, ಜೈಲಿನ ಆಸ್ಪತ್ರೆಯಲ್ಲಿ ಗಾಯಾಳು ಹುಚ್ಚ ವೆಂಕಟ್ಗೆ ಚಿಕಿತ್ಸೆ ನೀಡಲಾಗುತ್ತಿದೆ.
ಚಿಕಿತ್ಸೆ ಬಳಿಕ ಹುಚ್ಚ ವೆಂಕಟ್ ಜೈಲಿನ ಕೋಣೆಗೆ ವಾಪಸಾಗಿದ್ದಾನೆ. ನಿನ್ನೆ ಸಂಜೆಯಿಂದ ಹುಚ್ಚ ವೆಂಕಟ್ ಕಿರುಚಾಡುತ್ತಿದ್ದನೆಂದು ತಿಳಿದುಬಂದಿದೆ. ಹುಚ್ಚ ವೆಂಕಟ್ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದ್ದರೂ ಅವನ ಬಿಡುಗಡೆಗೆ ನೀಡಬೇಕಾದ ಶ್ಯೂರಿಟಿ ಇನ್ನೂ ಸಿಕ್ಕಿರಲಿಲ್ಲ.
ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಹುಚ್ಚ ವೆಂಕಟ್ನನ್ನು ಬಂಧಿಸಿ ಜೈಲು ಶಿಕ್ಷೆ ವಿಧಿಸಲಾಗಿತ್ತು. ಬಳಿಕ ಕೋರ್ಟ್ ಅವನಿಗೆ ಜಾಮೀನು ನೀಡಿದ್ದರೂ ಅವನಿಗೆ ಶ್ಯೂರಿಟಿ ಸಿಕ್ಕಿರಲಿಲ್ಲ.