Select Your Language

Notifications

webdunia
webdunia
webdunia
webdunia

ಉಮಾಶ್ರೀಗೆ ಸಚಿವ ಸ್ಥಾನ ಹೇಗೆ ದೊರೆಯಿತು ಬಹಿರಂಗಪಡಿಸಲಿ: ತೇಜಸ್ವಿನಿ

ಉಮಾಶ್ರೀಗೆ ಸಚಿವ ಸ್ಥಾನ ಹೇಗೆ ದೊರೆಯಿತು ಬಹಿರಂಗಪಡಿಸಲಿ: ತೇಜಸ್ವಿನಿ
ಬೆಂಗಳೂರು , ಬುಧವಾರ, 12 ನವೆಂಬರ್ 2014 (14:36 IST)
ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ಮಹಿಳಾ ನಾಯಕಿಯರಾದ ಮೋಟಮ್ಮಾ ಮತ್ತು ರಾಣಿ ಸತೀಶ್ ಮೂಲೆಗುಂಪಾಗಿದ್ದಾರೆ, ಉಮಾಶ್ರೀಯವರಿಗೆ ಸಚಿವ ಸ್ಥಾನ ಹೇಗೆ ದೊರೆಯಿತು ಎನ್ನುವುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಸವಾಲೆಸೆದಿದ್ದಾರೆ.
 
ಕಾಂಗ್ರೆಸ್ ಪಕ್ಷದಲ್ಲಿ ಮಾನ ಮರ್ಯಾದೆ ಇಲ್ಲದೇ ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಮಾನ ಮರ್ಯಾದೆ ಇಲ್ಲದವರಿಗೆ ಪಕ್ಷದಲ್ಲಿ ಸ್ಥಾನ ಮಾನಗಳು ದೊರೆಯುತ್ತಿವೆ ಎಂದು ಆರೋಪಿಸಿದ್ದಾರೆ.
 
ಹಿರಿಯ ನಾಯಕರು ಪಕ್ಷದ ಶಾಸಕರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಲಾಬಿ ಮಾಡುವುದೊಂದೆ ಕಾಂಗ್ರೆಸ್ ಪಕ್ಷದ ನಾಯಕರ ಸಮಾಜಸೇವೆಯಾಗಿದೆ ಎಂದು ತೇಜಸ್ವಿನಿ ಲೇವಡಿ ಮಾಡಿದ್ದಾರೆ.
 

Share this Story:

Follow Webdunia kannada