Webdunia - Bharat's app for daily news and videos

Install App

ಆ ಬಾಲಕಿ ಸಾವನ್ನು ಗೆದ್ದದ್ದು ಹೇಗೆ ಗೊತ್ತಾ?

Webdunia
ಶುಕ್ರವಾರ, 6 ಜುಲೈ 2018 (16:36 IST)
ಮಾರಣಾಂತಿಕ ಹೃದಯ ಸಂಬಂಧಿಯಿಂದ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ಬದುಕಿಸಿಕೊಳ್ಳಲು ಹೆತ್ತವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬದಲೀ ಹೃದಯ ಜೋಡಿಸಿದರಷ್ಟೇ ನಿಮ್ಮ ಮಗಳು ಬದುಕುಳಿಯಲು ಸಾಧ್ಯ ಎಂದು ವೈದ್ಯರು ಹೇಳಿದ ಮೇಲಂತೂ, ತಂದೆ-ತಾಯಿ ಅಕ್ಷರಶಃ ಕುಸಿದು ಹೋಗಿದ್ದರು. ಅದೃಷ್ಟವಶಾತ್ ಸಿರಿ ಅನ್ನೋ ಹಾಸನದ 10 ವರ್ಷದ ಬಾಲೆ, ಸಾವು ಸನ್ನಿಹಿತ ಅನ್ನುವಷ್ಟರಲ್ಲೇ  ಅದೇ ವಯೋಮಾನದ ಜೀವಂತ ಪುಟ್ಟ ಹೃದಯ ಸಿಕ್ಕಿದ್ದರಿಂದ, ಬಾಲಕಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.

ಮರುಹುಟ್ಟು ಪಡೆದ ಸಿರಿಯ ಪುನರಾಗಮನ ಹೆತ್ತವರು ಮತ್ತು ಸ್ಥಳೀಯವರ ಆನಂದ, ಸಂಭ್ರಮಕೆ ಪಾರವೇ ಇಲ್ಲದಂತಾಗಿದೆ.ಮತ್ತೊಂದು ವಿಶೇಷ ಎಂದ್ರೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ 10 ವರ್ಷದ ಬಾಲಕಿಗೆ ಬದಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.

6 ನೇ ತರಗತಿ ಓದುತ್ತಿರುವ ಸಿರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಅದು ಎಷ್ಟು ಗಂಭೀರವಾಗಿತ್ತು ಎಂದ್ರೆ ಬದಲೀ ಹೃದಯ ಜೋಡಿಸದಿದ್ರೆ ಸಿರಿ, ಬದುಕುಳಿಯುವುದೇ ಕಷ್ಟವಾಗಿತ್ತು. ಹೇಗಾದ್ರೂ ಮಾಡಿ ಮಗಳನ್ನು ಬದುಕಿಸಿಕೊಳ್ಳಬೇಕು ಅಂತ ಹೆತ್ತವರು, ಅನೇಕ ಕಡೆ ಸುತ್ತಾಡಿದ್ರೂ, ಎಲ್ಲೂ ಕೂಡ ಸಿರಿಗೆ ಮ್ಯಾಚ್ ಆಗುವ ಹೃದಯ ಸಿಗಲೇ ಇಲ್ಲ. ಅಲ್ಲಿಗೆ ಸಿರಿ ಬದುಕುಳಿಯುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಗಳು ಬದುಕದೇ ಇದ್ರೆ ನಮಗೂ ಜೀವನ ಬೇಡ ಅನ್ನೋ ಕಠಿಣ ನಿರ್ಧಾರಕ್ಕೆ ಪೋಷಕರು ಬಂದು ಬಿಟ್ಟಿದ್ದರು.

ಎಲ್ಲಾ ಕಡೆ ಅಲೆದು ಕೊನೆಗೆ ಕಳೆದ ಜನವರಿಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮಗಳನ್ನು ದಾಖಲು ಮಾಡಿದರು. ಆಗಲೂ ಸಿರಿಗೆ ಹೊಂದುವ ಹೃದಯ ಸಿಗಲೇ ಇಲ್ಲ. ಆದ್ರೆ ಕಳೆದ ಮಾರ್ಚ್ 13 ರಂದು ಮಾಗಡಿ ಮೂಲದ 10 ವರ್ಷದ ಬಾಲಕ ಅಪಘಾತದಿಂದ ಮೃತಪಟ್ಟ. ಬಾಲಕನ ಪೋಷಕರು ಉದಾರತೆಯಿಂದ ಆ ಹೃದಯ ಪಡೆದ ನಾರಾಯಣ ಹೃದಯಾಲಯದ ವೈದ್ಯರ ತಂಡ, ಯಶಸ್ವಿಯಾಗಿ ಸಿರಿಗೆ ಹೃದಯ ಜೋಡಣೆ ಮಾಡಿತು. ಅದೃಷ್ಟವಶಾತ್ ಬಾಲಕನ ಪುಟ್ಟ ಹೃದಯ, ಸಿರಿಗೆ ಮ್ಯಾಚ್ ಆಗಿದ್ದರಿಂದ, ಸಾವಿನ ದವಡೆಯಿಂದ ಬಾಲಕಿ ಪಾರಾಗಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments