Webdunia - Bharat's app for daily news and videos

Install App

ಬಿಎಸ್ ಯಡಿಯೂರಪ್ಪನವರ ಪತ್ನಿ ಸಾವು ಯಾಕೆ ಸುದ್ದಿಯಾಗಿದೆ, ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಏನಿತ್ತು

Krishnaveni K
ಮಂಗಳವಾರ, 22 ಅಕ್ಟೋಬರ್ 2024 (09:17 IST)
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರ ಪತ್ನಿ ಮೈತ್ರಾ ದೇವಿ ಸಾವಿಗೆ ಶೋಭಾ ಕರಂದ್ಲಾಜೆ ಕಾರಣ ಎಂದು ಸಚಿವ ಭೈರತಿ ಸುರೇಶ್ ಗಂಭೀರ ಆರೋಪ ಹೊರಿಸಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಇದರೊಂದಿಗೆ ಬಿಎಸ್ ಯಡಿಯೂರಪ್ಪನವರ ಪತ್ನಿ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮೈತ್ರಾ ದೇವಿ ಮೃತಪಟ್ಟಿದ್ದು 2004 ರಲ್ಲಿ. ಶಿವಮೊಗ್ಗದ ಮನೆಯಲ್ಲಿ ಮೈತ್ರಾ ದೇವಿ ಮೃತದೇಹ ನೀರಿನ ಸಂಪ್ ನಲ್ಲಿ ಕಂಡುಬಂದಿತ್ತು. ಆಗ ಯಡಿಯೂರಪ್ಪನವರು ಇನ್ನೂ ಮುಖ್ಯಮಂತ್ರಿಯಾಗಿರಲಿಲ್ಲ. ವಿಪಕ್ಷ ನಾಯಕರಾಗಿದ್ದರು.

ಇದರ ವಿಚಾರಣೆಗಳೂ ನಡೆದಿದೆ. ಪೋಸ್ಟ್ ಮಾರ್ಟಂ ರಿಪೋರ್ಟ್ ನಲ್ಲಿ ಇದು ನೀರಿನ ಸಂಪ್ ಗೆ ಬಿದ್ದು ಆಕಸ್ಮಿಕವಾಗಿ ಸಂಭವಿಸಿದ ಸಾವು ಎಂದು ವರದಿ ಬಂತು. ಪೊಲೀಸರು ಇದು ಸಹಜ ಸಾವೆಂದು ಕೇಸ್ ಕ್ಲೋಸ್ ಮಾಡಿದ್ದಾರೆ. ಆದರೆ ಯಡಿಯೂರಪ್ಪನವರನ್ನು ಆಗಾಗ ಪತ್ನಿಯ ಸಾವಿನ ವಿಚಾರವಾಗಿ ಕೆಣಕುತ್ತಲೇ ಇರುತ್ತಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಈ ಸಾವಿನ ಪ್ರಕರಣ ಸದ್ದು ಮಾಡಿತ್ತು 2009 ರಲ್ಲಿ ಸ್ಥಳೀಯ ವಕೀಲ ಕೆ ಶೇಷಾದ್ರಿ ಎಂಬವರು ಇದು ಆಕಸ್ಮಿಕ ಸಾವಲ್ಲ ಎಂದು ಸಂಶಯಿಸಿ ಕೋರ್ಟ್ ಗೆ ಮರು ತನಿಖೆ ಮಾಡಲು ಮನವಿ ಮಾಡಿದ್ದರು. ಈ ಪ್ರಕರಣದಲ್ಲಿ ಯಡಿಯೂರಪ್ಪನವರ ಜೊತೆಗೆ ಅವರ ಪುತ್ರರಾದ ಬಿವೈ ವಿಜಯೇಂದ್ರ, ರಾಘವೇಂದ್ರ, ಪುತ್ರಿ ಅರುಣಾ ದೇವಿ ಹಾಗೂ ಮೂವರು ನೌಕರರನ್ನೂ ಆರೋಪಿಯನ್ನಾಗಿ ಮಾಡಲಾಗಿತ್ತು. ಆಗ ಕೋರ್ಟ್ ಮತ್ತೆ ಮರು ವಿಚಾರಣೆಗೆ ಆದೇಶ ನೀಡಿತ್ತು.

ಪ್ರತೀ ಬಾರಿ ತನಿಖೆಯಾದಾಗಲೂ ಇದು ಸಹಜ ಸಾವೆಂದೇ ಕಂಡುಬಂದಿದೆ. ಹಾಗಿದ್ದರೂ ರಾಜಕೀಯ ಎದುರಾಳಿಗಳಿಗೆ ಯಡಿಯೂರಪ್ಪ ವಿರುದ್ಧ ಇದೊಂದು ಅಸ್ತ್ರವೇ ಆಗಿತ್ತು. ಈಗಲೂ ಅದು ಮುಂದುವರಿದಿದೆ. ಇದೀಗ ಮತ್ತೆ ಭೈರತಿ ಸುರೇಶ್ ಆ ಸಾವಿನ ಪ್ರಕರಣವನ್ನು ಎತ್ತಿದ್ದಾರೆ. ಇದರೊಂದಿಗೆ ಮತ್ತೊಮ್ಮೆ ಮೈತ್ರಾ ದೇವಿ ಸಾವಿನ ಪ್ರಕರಣ ಸದ್ದು ಮಾಡುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Rain: ಕರ್ನಾಟಕದಲ್ಲಿ ಮುಂದಿನ ಮೂರು ದಿನಗಳಿಗೆ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

Viral video: ಬೆಂಗಳೂರು ಡಿಆರ್ ಡಿಒ ಆಫೀಸರ್ ಮೇಲೆ ಕನ್ನಡಿಗನಿಂದ ಹಲ್ಲೆ ಕೇಸ್ ಗೆ ಟ್ವಿಸ್ಟ್: ಅಸಲಿಗೆ ನಡೆದದ್ದೇ ಬೇರೆಯೇ

DGP Om Prakash murder: ನಿವೃತ್ತ ಡಿಜಿಪಿ ಓಂ ಪ್ರಕಾಶ್ ಪತ್ನಿಗಿತ್ತು ಈ ಮಾನಸಿಕ ಕಾಯಿಲೆ

ಅಲಿಬಾಬ ಮತ್ತು 40 ಕಳ್ಳರ ಕಥೆಯ ತದ್ರೂಪವೇ ಸಿದ್ದರಾಮಯ್ಯರ ತಂಡ: ಡಿ.ವಿ. ಸದಾನಂದಗೌಡ

ಕಾಂಗ್ರೆಸ್ ಸರಕಾರವು ಜನರ ಪಾಲಿಗೆ ಬದುಕಿದ್ದೂ ಸತ್ತಂತಿದೆ: ಬಿ.ವೈ.ವಿಜಯೇಂದ್ರ

ಮುಂದಿನ ಸುದ್ದಿ
Show comments