Webdunia - Bharat's app for daily news and videos

Install App

ನಟಿ, ವಿಧಾನ ಪರಿಷತ್ ಸದಸ್ಯೆ ತಾರಾ ವಿರುದ್ಧ ಕಿರುಕುಳದ ಆರೋಪ

Webdunia
ಶನಿವಾರ, 7 ಮೇ 2016 (16:42 IST)
ನಟಿ ಮತ್ತು ವಿಧಾನಸಭಾ ಸದಸ್ಯೆ ತಾರಾ ತಮ್ಮ ಮನೆಕೆಲಸದಾಕೆಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ . ಆದರೆ ತಮ್ಮ ಮೇಲಿನ ಆರೋಪವನ್ನು ತಾರಾ ತಳ್ಳಿ ಹಾಕಿದ್ದಾರೆ.
 
ಮಗುವನ್ನು ನೋಡಿಕೊಳ್ಳಿ ಎಂದು ನನ್ನನ್ನು ಕರೆ ತಂದರು. ಆದರೆ ರಾತ್ರಿಯವರೆಗೂ ಮನೆಗೆಲಸ ಮಾಡುತ್ತಿದ್ದರು. ಮಧ್ಯಾಹ್ನವಾದರೂ ನನಗೆ ತಿಂಡಿ ಕೊಡುತ್ತಿರಲಿಲ್ಲ ಎಂದು ತುಮಕೂರಿನ ಗುಬ್ಬಿ ಮೂಲದ ಲತಾ ಎಂಬಾಕೆ ಆರೋಪಿಸಿದ್ದಾಳೆ. 
 
"ನಾನು ಪತಿಯನ್ನು ಕಳೆದುಕೊಂಡಿದ್ದು ಪತಿಯ ಆಸ್ತಿ ಸಂಬಂಧ ಕೋರ್ಟ್‌ನಲ್ಲಿ ಕೇಸ್ ನಡೆಯುತ್ತಿದೆ. ಕೋರ್ಟ್‌ಗೆ ಹೋಗಲು ಸಹ ಅವರು ಬಿಡುತ್ತಿರಲಿಲ್ಲ. ಇತ್ತೀಚಿಗೆ ಆರೋಗ್ಯ ಸರಿಯಿಲ್ಲವೆಂದು ಮನೆಗೆ ಬಂದೆ. ವಾಪಸ್ ಬಾ ಎಂದು ಪದೇ ಪದೇ ಕಾಡಿಸಿದ ತಾರಾ ಅವರು ನಿನ್ನ ಮೇಲೆ ಮತ್ತು ನಿನ್ನ ತಾಯಿ, ಅಣ್ಣನ ಮೇಲೆ ಎಸ್‌ಪಿ ದೂರು ನೀಡುತ್ತೇನೆ ಎಂದು ಧಮ್ಕಿ ಹಾಕುತ್ತಿದ್ದರು. ನಾನು ಕೆಲಸಕ್ಕೆ ಹಿಂತಿರುಗಿಲ್ಲವೆಂದು ತಮ್ಮ ಪ್ರಭಾವ ಬಳಸಿ ಖಾಸಗಿ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ನನ್ನ ಅಣ್ಣ ಲೋಕೇಶ್‍ರನ್ನೂ ಕೆಲಸದಿಂದ ತೆಗೆಸಿದ್ದಾರೆ. ನಮಗೆ ಜೀವನ ನಡೆಸುವುದು ಕಷ್ಟವಾಗಿದೆ", ಎಂಬುದು ಲತಾ ಅಳಲು. 
 
ಆದರೆ ತಮ್ಮ ವಿರುದ್ಧದ ಕಿರುಕುಳ ಆರೋಪವನ್ನು ತಾರಾ ಅಲ್ಲಗಳೆದಿದ್ದಾರೆ.  ಆಕೆ ತುಂಬ ಚೆನ್ನಾಗಿ ನನ್ನ ಮಗುವನ್ನು ನೋಡಿಕೊಂಡಳು. ಆಕೆ ಪದೇ ಪದೇ ಕೋರ್ಟ್‌ಗೆಂದು ಊರಿಗೆ ಹೋಗುತ್ತಿದ್ದುದು ನನಗೆ ಸಮಸ್ಯೆಯನ್ನುಂಟು ಮಾಡುತ್ತಿದ್ದುದು ಹೌದು. ಆದರೆ ನಾನು ಯಾವುದೇ ಕಿರುಕುಳ ನೀಡಿಲ್ಲ. ಲತಾಳನ್ನು ನಾನು ಚೆನ್ನಾಗಿಯೇ ನೋಡಿಕೊಂಡಿದ್ದೇನೆ. ಆಕೆ ಕೂಡ ಚೆನ್ನಾಗಿ ಹೊಂದಿಕೊಂಡಿದ್ದಳು. ಆಕೆಯ ಅಣ್ಣ ಲೋಕೇಶ್‍ ಕೆಲಸ ಕಳೆದುಕೊಂಡಿದ್ದಕ್ಕೂ ನನಗೂ ಏನೂ ಸಂಬಂಧವಿಲ್ಲ. ಅವರು ಕೆಲಸ ಕಳೆದುಕೊಂಡರೆ ನನಗೇನು ಲಾಭ ಎಂದು ನಟಿ ತಾರಾ ಸ್ಪಷ್ಟ ಪಡಿಸಿದ್ದಾರೆ.  
 
ನನ್ನ ಮಗುವನ್ನು ನೋಡಿಕೊಳ್ಳುವ ಕೆಲಸ ಬಿಟ್ಟು ಬೇರೆ ಕೆಲಸವನ್ನು ಆಕೆಗೆ ಕೊಟ್ಟಿಲ್ಲ. ಅಡುಗೆ ಮಾಡಲು, ಮನೆಯ ಇತರೆ ಕೆಲಸ ಮಾಡಲು ಬೇರೆ ಕೆಲಸದವರು ಇದ್ದಾರೆ. ಅವರ ಈ ಸುಳ್ಳು ಆರೋಪ ನನಗೆ ನೋವುಂಟು ಮಾಡಿದೆ ಎಂದು ತಾರಾ ಬೇಸರ ವ್ಯಕ್ತ ಪಡಿಸಿದ್ದಾರೆ. 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಹಾರಲು ಪರ್ಮಿಷನ್ ಬೇಕಾಗಿಲ್ಲ ಎಂದ ಶಶಿ ತರೂರ್: ಮುಂದಿನ ಸಲ ಬಿಜೆಪಿ ಪಕ್ಕಾ ಎಂದ ನೆಟ್ಟಿಗರು

ವಾಲ್ಮೀಕಿ ಹಗರಣ ಎಷ್ಟು ಕೋಟಿ, ವಂಚನೆಯಾಗಿದ್ದು ಹೇಗೆ ಎಂದ ಬಿಜೆಪಿ ನಾಯಕ ಬಂಗಾರು ಹನುಮಂತು

ವನ್ಯಜೀವಿ, ಮಾನವ ಸಂಘರ್ಷವನ್ನು ಪರಿಗಣಿಸದಿರುವುದೇ ಹುಲಿಗಳ ಸಾವಿಗೆ ಕಾರಣ: ಸುನೀಲ್ ಕುಮಾರ್‌ ವಿಷಾದ

ಅಮರನಾಥ ಯಾತ್ರೆಗೆ ಯಾತ್ರಿಕರ ಸಂಖ್ಯೆಯಲ್ಲಿ ಇಳಿಕೆ, ಇದೇ ಕಾರಣ ಎಂದ ಗವರ್ನರ್‌

ಬೇಸತ್ತು ಹೋದೆ: ಕ್ಯಾನ್ಸರ್‌ ರೋಗಿ ಅಜ್ಜಿಯನ್ನು ಬೀದಿಯಲ್ಲಿ ಬಿಡಲು ಕಾರಣ ಕೊಟ್ಟ ಮೊಮ್ಮಗ

ಮುಂದಿನ ಸುದ್ದಿ
Show comments