ಹೋಟೆಲ್ ಮಾಲಿಕರಿಂದ ಗ್ರಾಹಕರಿಗೆ ಶಾಕ್..!

Webdunia
ಮಂಗಳವಾರ, 5 ಏಪ್ರಿಲ್ 2022 (20:42 IST)
ದಿನನಿತ್ಯ ಬಳಸುವ ವಸ್ತುಗಳ‌ ಮೇಲೆ ದರ ಹೆಚ್ಚಾಗಿರುವಿದರಿಂದ, ಹೋಟಲ್ ಮಾಲಿಕರು ಸಹ ಉಪಹಾರಗಳಲ್ಲಿ ಇವತ್ತಿನಿಂದಲ್ಲೆ ದರ ಪರಿಷ್ಕರಣೆ ಮಾಡಲಿದ್ದಾರೆ.. ಎಲ್‌ಪಿಜಿ ಸಿಲಿಂಡರ್ ದರ ಏರಿಕೆ,ಹಾಲು,‌ ಅಡುಗೆ ಎಣ್ಣೆ, ದರ ಹೆಚ್ಚಾಗಿರೋ ಹಿನ್ನಲೆ ನೇರವಾಗಿ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡಲಿದ್ದಾರೆ, ಎಲ್ಲಾ ಆಹಾರಗಳಮೇಲು, 5 ರಿಂದ 10 ರೂಪಾಯಿ‌ ಹೆಚ್ಚಳಕ್ಕೆ ಮುಂದಾಗಿದ್ದಾರೆ.
ಕಾಫಿ‌ ದರ ಮೊದಲು 10 ರೂ, ಈಗ 12 ರಿಂದ 15 ರೂಗೆ ಏರಿಕೆ.
ವಡೆ ದರ ಮೊದಲು 20 ರೂ, ಈಗ 25 ರಿಂದ 30 ರೂಗೆ ಏರಿಕೆ.
ಎರಡು ಇಡ್ಲಿಯ ದರ 30 ರಿಂದ 35 ರೂ, ಈಗ‌ 40 ರೂಗೆ ಏರಿಕೆ.
ದೋಸೆ ದರ 50 ರೂ ಇರೋದು 65 ರೂಗೆ ಏರಿಕೆ.
ಕರಬಾತು ದರ 25 ರೂಪಾಯಿ ಇದ್ದಾದು 26-27
ಏರಿಕೆಯಾಗ್ತಿದೆ.
ರೈಸ್ ಬಾತ್ ದರ 40 ರೂಪಾಯಿ ಇದ್ದಾದ್ದು ,ಈಗ  42 ರೂ ಗೆ ಏರಿಕೆಯಾಗಿದೆ.
ಸೌತ್ ಇಂಡಿಯಾ ಊಟ 100-115 ಇದ್ದಾದ್ದು 120-125 ಏರಿಕೆ.
ನಾರ್ತ್ ಇಂಡಿಯಾ 190 ಇದ್ದಾದ್ದು 200-210ರೂಪಾಯಿ ಏರಿಕೆಯಾಗಿದೆ.
ಇನ್ನೂ ಸ್ವೀಟ್ಸ್ ಲ್ಲೂ 2-3 ರೂಪಾಯಿ ಹೆಚ್ಚಾಗಲಿದ್ದಯ, ಹಲವಾರು ತಿನಿಸುಗಳ ಮೇಲೆ ಬೆಲೆ ಹೆಚ್ಚಾಗಿದ್ದು, ಇದೆಲ್ಲವೂ ಗ್ರಾಹಕರಿಗೆ ತಲೆಬಿಸಿಯಾದಂತಾಗಿದೆ..
 
 ದಿನ ನಿತ್ಯವೂ ಒಂದಾದರ ಮೇಲೆ ಮತ್ತೊಂದು ಅಗತ್ಯವಸ್ತುಗಳ‌ ಮೇಲೆ ದರ ಪರಿಷ್ಕರಣೆ ಮಾಡ್ತಿದ್ರೆ, ಸಾರ್ವಜನಿಕರ ಗತಿ ಆದೋಗತಿ ಆಗೋದ್ರಲ್ಲಿ ಎರಡುಮಾತಿಲ್ಲ.. ಮೊದಲಿಗೆ ದಿನೇ ದಿನೇ ಪೆಟ್ರೋಲ್,ಡೀಸೆಲ್‌ ದರ ಹೆಚ್ಚಾಯ್ತು ತದ ನಂತರ, ಅಡುಗೆ ಎಣ್ಣೆ ಏಕಾಏಕಿ ಹೆಚ್ಚಾಯ್ತು, ಹಾಲಿನ ದರವೂ, ಏರಿಕೆ ಆಯ್ತು.. ಇದೆಲ್ಲವುದರಿಂದ ತಪ್ಪಿಸಿಕೊಳ್ಳಲು, ವ್ಯಾಪಾರಸ್ಥರು ಗ್ರಾಹಕರ ತಲೆಯಮೇಲೆ ಹಾಕುತ್ತಿದ್ದಾರೆ.. ಈಗಾಗ್ಲೆ ಟ್ಯಾಕ್ಸಿಯವರು ದರ ಪರಿಷ್ಕರಣೆ ಮಾಡ್ತಿದ್ದಾರೆ, ಈಗ ಹೋಟೆಲ್ ನವ್ರು, ಹಾಗಾದ್ರೆ ಗ್ರಾಹಕರು ಎಲ್ಲಿಗೆ ಹೋಗಬೇಕು ಇನ್ನೂ ಯಾವ್ದು ಯಾವುದರ ಬೆಲೆ ಎಷ್ಟೆಷ್ಟಾಗುತ್ತೊ, ಈ ದುಬಾರಿ ದುನಿಯಾದಲ್ಲಿ ಹೇಗೆ ಜೀವನ ಸಾಗಿಸೋದು ಅನ್ನೋದೆ ಸಾರ್ವಜನಿಕರ ಯಕ್ಷ ಪ್ರೆಶ್ನೆಯಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ನಾಯಕನಿದ್ದರೆ ಸಮುದಾಯಕ್ಕೆ ಬಲ, ಸಿದ್ದು ಪರ ಪುತ್ರ ಯತೀಂದ್ರ ಅಬ್ಬರದ ಭಾಷಣ

ಗೋವಾದಲ್ಲಿ ವಿಶ್ವದ ಅತಿ ಎತ್ತರದ ರಾಮನ ಪ್ರತಿಮೆ ಅನಾವರಣಗೊಳಿಸಿದ ಮೋದಿ

ಶಕ್ತಿ, ಗೃಹಲಕ್ಷ್ಮಿ ಯೋಜನೆಯಿಂದ ತಲಾ ಆದಾಯದಲ್ಲಿ ದೇಶದಲ್ಲಿಯೇ ರಾಜ್ಯ ಮೊದಲು: ಸಿದ್ದರಾಮಯ್ಯ

ಸಿದ್ದರಾಮಯ್ಯ ಸಂಕಲ್ಪನೂ ಈಡೇರುತ್ತೆ, ಡಿಕೆಶಿ ಸಿಎಂ ಆಗುತ್ತಾರೆ: ಜನಾರ್ದನ ರೆಡ್ಡಿ

ಇದಕ್ಕೆಲ್ಲ ಖರ್ಗೆ, ರಾಹುಲ್ ಗಾಂಧಿ ಪರಿಹಾರ ಹುಡುಕುತ್ತಾರೆ: ಕೆ ಹರಿಪ್ರಸಾದ್

ಮುಂದಿನ ಸುದ್ದಿ
Show comments