Select Your Language

Notifications

webdunia
webdunia
webdunia
webdunia

ಭೀಕರ ಅಪಘಾತ: ಪೊಲೀಸ್ ಅಧಿಕಾರಿ ದುರ್ಮರಣ

ಭೀಕರ ಅಪಘಾತ: ಪೊಲೀಸ್ ಅಧಿಕಾರಿ ದುರ್ಮರಣ
ಬಾಗಲಕೋಟೆ , ಗುರುವಾರ, 27 ಆಗಸ್ಟ್ 2015 (12:42 IST)
ಬಾಗಲಕೋಟೆ ಜಿಲ್ಲೆಯ ಬೀಳಗಿ ಸಮೀಪ ಇಂದು ನಸುಕಿನ ಜಾವ 2 ಗಂಟೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಉತ್ತರ ಕನ್ನಡದ ಕುಮಟಾ ಪೊಲೀಸ್ ಠಾಣಾ ಸಿಪಿಐ ಶಿವಾನಂದ್‌.ಜಿ.ನರಬೋಳ ದುರ್ಮರಣವನ್ನಪ್ಪಿದ್ದಾರೆ
 
ಕಲಬುರ್ಗಿಯಿಂದ ಕುಮಟಾಕ್ಕೆ ಮರಳುತ್ತಿದ್ದ ಸಿಪಿಐ ಶಿವಾನಂದ್‌ ಅವರ ಸ್ವಿಪ್ಟ್‌‌ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. 
 
ಶಿವಾನಂದ್ ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿಯವರಾಗಿದ್ದು ಕುಮಟಾದಲ್ಲಿ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದರು.

ಕರ್ತವ್ಯದ ನಿಮಿತ್ತ ಕಲಬುರ್ಗಿಗೆ ತೆರಳಿದ್ದ ಅವರು ಕುಮಟಾಕ್ಕೆ ಮರಳುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯ ನಂತರ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. 
 
ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada