Select Your Language

Notifications

webdunia
webdunia
webdunia
webdunia

ಭೀಕರ ಅಪಘಾತ: ಮೂವರ ದುರ್ಮರಣ

ಭೀಕರ ಅಪಘಾತ: ಮೂವರ ದುರ್ಮರಣ
ಬಳ್ಳಾರಿ , ಬುಧವಾರ, 10 ಫೆಬ್ರವರಿ 2016 (08:48 IST)
ಜಿಲ್ಲೆಯ ಸಿಂದಗೇರಿ ಗ್ರಾಮದಲ್ಲಿ ಇಂದು ಮುಂಜಾನೆ ಸಂಭವಿಸಿರುವ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
 
ರಾಜ್ಯ ಹೆದ್ದಾರಿ 19ರಲ್ಲಿ ಇಂದು ಮುಂಜಾನೆ 6.30 ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು  ಲಾರಿಯೊಂದು ಎತ್ತಿನ ಬಂಡಿಗೆ ಡಿಕ್ಕಿ ಹೊಡೆದ ಪರಿಣಾಮ ಎತ್ತಿನಗಾಡಿಯಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೆ ಮೂವರು ಗಾಯಗೊಂಡಿದ್ದಾರೆ. ಒಂದು ಎತ್ತು ಸಹ ಸಾವನ್ನಪ್ಪಿದ್ದು ಮತ್ತೊಂದಕ್ಕೆ ಗಾಯವಾಗಿದೆ. ಮೃತರೆಲ್ಲರೂ ಸಿಂದಗೇರಿ ಗ್ರಾಮದವರಾಗಿದ್ದಾರೆ.
 
ಮೃತರನ್ನು ಎತ್ತಿನಗಾಡಿ ನಡೆಸುತ್ತಿದ್ದ  ಕಂಪ್ಲಿ ಬಸವ (30) ನಾಗಮ್ಮ (45) ಅವರ ಸೊಸೆ ಶಾಲಾಕ್ಷಿ (20) ಎಂದು ಗುರುತಿಸಲಾಗಿದೆ. ಗಾಯಗೊಂಡಿರುವವರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. 
 
ಚಾಲಕನ ನಿಯಂತ್ರಣ ತಪ್ಪಿ ಲಾರಿ ಬಂಡಿಗೆ ಡಿಕ್ಕಿ ಹೊಡೆದಿದೆ. ಲಾರಿ ಚಾಲಕನ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಕುರುಗೋಡು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. 

Share this Story:

Follow Webdunia kannada