Select Your Language

Notifications

webdunia
webdunia
webdunia
webdunia

ಭೀಕರ ಅಪಘಾತ: ನಿಶ್ಚಿತಾರ್ಥಕ್ಕೆಂದು ಹೋದವರು ಹೆಣವಾದರು

ಭೀಕರ ಅಪಘಾತ: ನಿಶ್ಚಿತಾರ್ಥಕ್ಕೆಂದು ಹೋದವರು ಹೆಣವಾದರು
ಯಾದಗಿರಿ , ಮಂಗಳವಾರ, 21 ಫೆಬ್ರವರಿ 2017 (07:30 IST)
ಮದುವೆ ನಿಶ್ಚಿತಾರ್ಥಕ್ಕೆಂದು ಹೋಗಿ ಮರಳುವಾಗ ಸಂಭವಿಸಿದ ಭೀಕರದ ಅಪಘಾತದಲ್ಲಿ  11 ಜನರು ದುರ್ಮರಣವನ್ನಪ್ಪಿ 37ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ದಾರುಣ ಘಟನೆ ಯಾದಗಿರಿಯ ಆಶನಾಳದ ಬಳಿ ಸೋಮವಾರ ಮಧ್ಯಾಹ್ನ 6ರ ಸುಮಾರಿಗೆ ನಡೆದಿದೆ.
ಮೃತರೆಲ್ಲರೂ ಮಿನಿಲಾರಿಯಲ್ಲಿ ಪ್ರಯಾಣಿಸುತ್ತಿದ್ದು ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಗ್ರಾಮದಲ್ಲಿ ಮದುವೆ ನಿಶ್ಚಿತಾರ್ಥ ಮುಗಿಸಿ ಸ್ವಗ್ರಾಮ ಆಶನಾಳಕ್ಕೆ ಹಿಂತಿರುಗುತ್ತಿದ್ದರು. ಗ್ರಾಮ ತಲುಪಲು ಇನ್ನು 5 ಕೀಲೋಮೀಟರ್ ಇರುವಾಗ ಎದುರಿನಿಂದ ಬಂದ ಟ್ಯಾಂಕ್ ವಾಹನ ಮಿನಿಲಾರಿಗೆ ಗುದ್ದಿದೆ. ಅಪಘಾತದ ರಭಸಕ್ಕೆ ಮಿನಿಲಾರಿ ನಜ್ಜುಗುಜ್ಜಾಗಿದ್ದು ಅದರಲ್ಲಿದ್ದ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅದರಲ್ಲಿ ಮೂವರು ಒಂದೇ ಕುಟುಂಬದವರಾಗಿದ್ದಾರೆ. ವಾಹನದಲ್ಲಿ ಅದರಲ್ಲಿ 50ಕ್ಕೂ ಹೆಚ್ಚು ಮಂದಿ ಇದ್ದರೆನ್ನಲಾಗುತ್ತಿದೆ.
 
ಮೃತರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದು ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. 
 
ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದ್ದು, ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.ಯಾದಗಿರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಣಪತಿ ಆತ್ಮಹತ್ಯೆ ಸಿಬಿಐಗೆ ಯಾಕಿಲ್ಲ?