Select Your Language

Notifications

webdunia
webdunia
webdunia
webdunia

ಅಂಗನವಾಡಿ ಕಾರ್ಯಕರ್ತೆಯ ಅಪಹರಣ: ದೂರು ದಾಖಲು

ಅಂಗನವಾಡಿ ಕಾರ್ಯಕರ್ತೆಯ ಅಪಹರಣ: ದೂರು ದಾಖಲು
ರಾಯಚೂರು , ಮಂಗಳವಾರ, 26 ಮೇ 2015 (13:06 IST)
ಕಾರ್ಯ ನಿಮಿತ್ತ ತೆರಳುತ್ತಿದ್ದ ಅಂಗನವಾಡಿ ಶಿಕ್ಷಕಿಯೋರ್ವಳನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ತವಳುತಾಂಡ ಎಂಬ ಗ್ರಾಮದಲ್ಲಿ ನಡೆದಿದೆ. 
 
ಅಪಹರಣಕ್ಕೊಳಗಾದ ಮಹಿಳೆಯನ್ನು ಸೋನುಭಾಯಿ(30) ಎಂದು ಹೇಳಲಾಗಿದ್ದು, ಇಲ್ಲಿನ ಸೋಫಿಯಾ ತಾಂಡಾದ ನಿವಾಸಿ ಎಂದು ಹೇಳಲಾಗಿದೆ.  
 
ಪ್ರಕರಣದ ಹಿನ್ನೆಲೆ: ಮಹಿಳೆಯು ಎಂದಿನಂತೆ ಇಂದೂ ಕೂಡ ಕರ್ತವ್ಯಕ್ಕೆ ಹಾಜರಾಗುತ್ತಿದ್ದರು ಈ ವೇಳೆ ಅಂಗನವಾಡಿಗೆ ತೆರಳುವ ಮುನ್ನವೇ ಅಡ್ಡಗಟ್ಟಿರುವ ಅನಾಮಧೇಯ ಕಿಡಿಗೇಡಿಗಳು ಆಕೆಯನ್ನು ಅಪಹರಿಸಿದ್ದಾರೆ ಎನ್ನಲಾಗಿದೆ. 
 
ಪತ್ನಿ ಅಂಗನವಾಡಿಯಲ್ಲಿದ್ದಾಳೆ ಎಂಬ ಕಾರಣದಿಂದ ಆಕೆಯ ಪತಿ ಅಂಗನವಾಡಿ ಕೇಂದ್ರಕ್ಕೆ ಬಂದಿದ್ದಾರೆ. ಆದರೆ ಅಲ್ಲಿ ಆಕೆ ಇಲ್ಲದ್ದು ಕಂಡು ಬಂದಿದೆ. ಇದರಿಂದ ಭಯಭೀತನಾದ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. 
 
ಇನ್ನು ಪತಿ ದೂರಿನನ್ವಯ ದೇವದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮಹಿಳೆಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಅಲ್ಲದೆ ಹಳೆಯ ದ್ವೇಷವೇ ಇದಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. 

Share this Story:

Follow Webdunia kannada