Select Your Language

Notifications

webdunia
webdunia
webdunia
webdunia

ಬಿಬಿಎಂಪಿ ಆಯುಕ್ತರ ಗೈರುಹಾಜರಿಗೆ ಕಿಡಿಕಾರಿದ ಹೈಕೋರ್ಟ್

ಬಿಬಿಎಂಪಿ ಆಯುಕ್ತರ ಗೈರುಹಾಜರಿಗೆ ಕಿಡಿಕಾರಿದ ಹೈಕೋರ್ಟ್
ಬೆಂಗಳೂರು , ಮಂಗಳವಾರ, 2 ಫೆಬ್ರವರಿ 2016 (16:58 IST)
ಪದೇ ಪದೇ ವಿಚಾರಣೆಗೆ ಗೈರುಹಾಜರಾದ ಬಿಬಿಎಂಪಿ ಆಯುಕ್ತ ಕುಮಾರ್ ನಾಯಕ್ ಬೇಜವಾಬ್ದಾರಿಗೆ ಹೈಕೋರ್ಟ್ ಕಿಡಿಕಾರಿದೆ. ಸಿಕೆಎಲ್ ಲೇಔಟ್‌ನಲ್ಲಿ ಪಾರ್ಕ್ ಒತ್ತುವರಿ ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿತ್ತು.  

ಮುಂದಿನ ವಿಚಾರಣೆಗೆ ಖುದ್ದಾಗಿ ಕುಮಾರನಾಯಕ್ ಬರಬೇಕಿದ್ದು, ಅವರು ಗೈರುಹಾಜರಾದರೆ ಅವರನ್ನು ಖುದ್ದಾಗಿ ಹಾಜರುಪಡಿಸಿ ಎಂದು ಕೋರ್ಟ್ ಪೊಲೀಸ್ ಇಲಾಖೆಗೆ ಸೂಚಿಸಿದೆ.

ಕೆ.ಎಲ್. ಚಕ್ರಪಾಣಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಸಂತೋಷ್ ಹಾಗೂ ಇತರರು ಸಿಕೆಎಲ್ ಲೇಔಟ್‌ನಲ್ಲಿ ಪಾರ್ಕ್ ಕಬಳಿಕೆ ಮಾಡಿದ್ದಾರೆಂದು ಚಕ್ರಪಾಣಿ ರಿಟ್ ಅರ್ಜಿಯಲ್ಲಿ  ಆರೋಪ ಮಾಡಿದ್ದರು. 5 ಬಾರಿ ಸಮನ್ಸ್ ಕಳಿಸಿದ್ದರೂ ಕುಮಾರ್ ನಾಯಕ್ ಹಾಜರಾಗದಿದ್ದರಿಂದ ಖುದ್ದಾಗಿ ಹಾಜರುಪಡಿಸುವಂತೆ ಹೈಕೋರ್ಟ್ ಸೂಚಿಸಿದೆ. 

Share this Story:

Follow Webdunia kannada