Webdunia - Bharat's app for daily news and videos

Install App

ಸಹೋದರ ಸಂಬಂಧಿಗಳಿಂದ ಕಿರುಕುಳ: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

Webdunia
ಗುರುವಾರ, 30 ಜುಲೈ 2015 (13:09 IST)
ತಮ್ಮ ದಾಯಾದಿಗಳ ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಬೇಸತ್ತ ಇಲ್ಲಿನ ಕುಟುಂಬವೊಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ದಯಾಮರಣ ಕೋರಿ ತಮ್ಮದೇ ರಕ್ತದಲ್ಲಿ ಪತ್ರ ಬರೆದಿರುವ ಧಾರುಣ ಘಟನೆ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ನಡೆದಿದೆ.  
 
ಹೌದು, ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದರ ಸಂಬಂಧಿಗಳಿಂದ ಕಳೆದ ನಾಲ್ಕು ವರ್ಷಗಳಿಂದ ಥಳಿತಕ್ಕೊಳಗಾಗಿ ಮಾನಸಿಕ ಹಿಂಸೆಯನ್ನೂ ಅನುಭವಿಸುತ್ತಿರುವ ಈ ಕುಟುಂಬ ಅಂತಿಮವಾಗಿ ದಯಾಮರಣಕ್ಕೆ ಮೊರೆ ಹೋಗಿದೆ. 
 
ತೊಂದರೆ ಅನುಭವಿಸಿ ದಯಾಮರಣ ಕೋರಿ ಪತ್ರ ಬರೆದಿರುವರು ಇಲ್ಲಿನ ತಾರಿಹಾಳ ಗ್ರಾಮದ ನಿವಾಸಿ ಮಹಾದೇವಪ್ಪ ಹುಲಕೊಪ್ಪ ಮತ್ತು ಉಮಾ ಹುಲಕೊಪ್ಪ ಹಾಗೂ ಸಹದೇವಪ್ಪ ಮತ್ತು ಉಮಾ ದೇವಿ ಅವರೇ ಆಗಿದ್ದಾರೆ. ಇವರು ಈ ಹಿಂದೆಯೇ ಐಜಿಪಿ, ಲೋಕಾಯುಕ್ತ ಹಾಗೂ ಮಾನವಹಕ್ಕುಗಳ ಆಯೋಗಕ್ಕೂ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ತೀವ್ರ ನೋವನ್ನು ಅನುಭವಿಸುತ್ತಿರುವ ಕುಟುಂಬ ಅಂತಿಮವಾಗಿ ದಯಾಮರಣಕ್ಕೆ ಮೊರೆ ಹೋಗಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments