Select Your Language

Notifications

webdunia
webdunia
webdunia
webdunia

ಸಹೋದರ ಸಂಬಂಧಿಗಳಿಂದ ಕಿರುಕುಳ: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ

ಸಹೋದರ ಸಂಬಂಧಿಗಳಿಂದ ಕಿರುಕುಳ: ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ಕುಟುಂಬ
ಹುಬ್ಬಳ್ಳಿ , ಗುರುವಾರ, 30 ಜುಲೈ 2015 (13:09 IST)
ತಮ್ಮ ದಾಯಾದಿಗಳ ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದ ಬೇಸತ್ತ ಇಲ್ಲಿನ ಕುಟುಂಬವೊಂದು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ದಯಾಮರಣ ಕೋರಿ ತಮ್ಮದೇ ರಕ್ತದಲ್ಲಿ ಪತ್ರ ಬರೆದಿರುವ ಧಾರುಣ ಘಟನೆ ತಾಲೂಕಿನ ತಾರಿಹಾಳ ಗ್ರಾಮದಲ್ಲಿ ನಡೆದಿದೆ.  
 
ಹೌದು, ಜಮೀನಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಸಹೋದರ ಸಂಬಂಧಿಗಳಿಂದ ಕಳೆದ ನಾಲ್ಕು ವರ್ಷಗಳಿಂದ ಥಳಿತಕ್ಕೊಳಗಾಗಿ ಮಾನಸಿಕ ಹಿಂಸೆಯನ್ನೂ ಅನುಭವಿಸುತ್ತಿರುವ ಈ ಕುಟುಂಬ ಅಂತಿಮವಾಗಿ ದಯಾಮರಣಕ್ಕೆ ಮೊರೆ ಹೋಗಿದೆ. 
 
ತೊಂದರೆ ಅನುಭವಿಸಿ ದಯಾಮರಣ ಕೋರಿ ಪತ್ರ ಬರೆದಿರುವರು ಇಲ್ಲಿನ ತಾರಿಹಾಳ ಗ್ರಾಮದ ನಿವಾಸಿ ಮಹಾದೇವಪ್ಪ ಹುಲಕೊಪ್ಪ ಮತ್ತು ಉಮಾ ಹುಲಕೊಪ್ಪ ಹಾಗೂ ಸಹದೇವಪ್ಪ ಮತ್ತು ಉಮಾ ದೇವಿ ಅವರೇ ಆಗಿದ್ದಾರೆ. ಇವರು ಈ ಹಿಂದೆಯೇ ಐಜಿಪಿ, ಲೋಕಾಯುಕ್ತ ಹಾಗೂ ಮಾನವಹಕ್ಕುಗಳ ಆಯೋಗಕ್ಕೂ ಕೂಡ ಈ ಸಂಬಂಧ ದೂರು ಸಲ್ಲಿಸಿದ್ದರು. ಆದರೆ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಕಾರಣ ತೀವ್ರ ನೋವನ್ನು ಅನುಭವಿಸುತ್ತಿರುವ ಕುಟುಂಬ ಅಂತಿಮವಾಗಿ ದಯಾಮರಣಕ್ಕೆ ಮೊರೆ ಹೋಗಿದ್ದಾರೆ. 

Share this Story:

Follow Webdunia kannada