Webdunia - Bharat's app for daily news and videos

Install App

ಭಾರೀ ಮಳೆ: ವ್ಯಕ್ತಿ ನೀರುಪಾಲು

Webdunia
ಸೋಮವಾರ, 5 ಅಕ್ಟೋಬರ್ 2015 (12:16 IST)
ತುಂಬಿ ಹರಿಯುತ್ತಿದ್ದ ಹಳ್ಳವೊಂದನ್ನು ದಾಟಲು ಯತ್ನಿಸಿದ ವ್ಯಕ್ತಿಯೋರ್ವ ನೀರಿನಲ್ಲಿಯೇ ಕೊಚ್ಚಿ ಹೋಗಿರುವ ಘಟನೆ ನಿನ್ನೆ ಬಳ್ಳಾರಿ ನಗರದ ಹೊರವಲಯದ ಅಂದ್ರಾಳ್ ಎಂಬ ಹಳ್ಳವೊಂದರಲ್ಲಿ ನಿನ್ನೆ ಸಂಜೆ ನಡೆದಿದೆ. 
 
ನಿನ್ನೆ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಈ ಘಟನೆ ಸಂಭವಿಸಿದ್ದು, ನೀರು ಪಾಲಾಗಿ ಪ್ರಾಣ ಕಲೆದುಕೊಂಡ ವ್ಯಕ್ತಿಯನ್ನು ದಾದಾ ಕಲಂದರ್(30) ಎಂದು ತಿಳಿದು ಬಂದಿದೆ. 
 
ಕಲಂದರ್ ನಿನ್ನೆ ಕಾರ್ಯ ನಿಮಿತ್ತ ಜಮೀನಿಗೆ ತೆರಳಿದ್ದರು. ಆದರೆ ಭಾರೀ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಮನೆಗೆ ವಾಪಾಸಾಗುತ್ತಿದ್ದರು. ಈ ವೇಳೆ ಹಳ್ಳವನ್ನು ದಾಟಲು ಮುಂದಾಗಿದ್ದಾರೆ. ಆದರೆ ನೀರು ಅಗಾಧ ಪ್ರಮಾಣದಲ್ಲಿ ಹರಿಯುತ್ತಿದ್ದ ಕಾರಣ ನೀರಿನ ರಭಸಕ್ಕೆ ಸಿಲುಕಿದ ವ್ಯಕ್ತಿ ಹೊರ ಬರಲಾಗಿದೆ ಕೊಚ್ಚಿ ಹೋಗಿದ್ದಾರೆ. 
 
ಮೃತ ದೇಹವನ್ನು ಈಗಾಗಲೇ ಪತ್ತೆ ಹಚ್ಚಲಾಗಿದ್ದು, ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸುತ್ತಿದ್ದಾರೆ. ಈ ಸಂಬಂಧ ನಗರದ ಎಪಿಎಂಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments