Select Your Language

Notifications

webdunia
webdunia
webdunia
webdunia

ಅಮಲೇರಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ

ಅಮಲೇರಿಸಿಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡ ಯುವಕ
ಮೈಸೂರು , ಭಾನುವಾರ, 27 ಜುಲೈ 2014 (17:18 IST)
ಮದ್ಯದ ಅಮಲು ಹೆಚ್ಚಿಸಿಕೊಳ್ಳಲು  ಸರಾಯಿಯಲ್ಲಿ ಶುಂಠಿ,ಹೊಗೆಸೊಪ್ಪು, ಮೆಣಸು ಮತ್ತು ಇತರ ಕೆಲವು ವಸ್ತುಗಳನ್ನು ಬೆರೆಸಿ ಕುಡಿದ ಪರಿಣಾಮ ಓರ್ವ ಯುವಕ ಮೃತಪಟ್ಟು, ಉಳಿದವರಿಬ್ಬರು ಗಂಭೀರವಾಗಿ ಅಸ್ವಸ್ಥರಾದ ಘಟನೆ  ಮೈಸೂರಿನ ಹಳೇಕೇರಿಹಾಡಿಯಲ್ಲಿ ನಡೆದಿದೆ.

ಮೃತನನ್ನು 18 ವರ್ಷದ ಕುಮಾರ್ ಎಂದು ಗುರುತಿಸಲಾಗಿದ್ದು, ಒಬ್ಬ ಮಹಿಳೆ ಸೇರಿದಂತೆ ಮೂವರು  ಜಾಸ್ತಿ ಅಮಲೇರಿಸಿಕೊಳ್ಳುವ ಉದ್ದೇಶದಿಂದ ಶುಂಠಿ ಮತ್ತು ಮತ್ತಿತರ ವಸ್ತುಗಳನ್ನು ಬೆರೆಸಿ ಮೀತಿ ಮೀರಿ ಮದ್ಯ ಕುಡಿದಿದ್ದರು ಎಂದು ತಿಳಿದು ಬಂದಿದೆ. 
 
ಕುಡಿದ ಸ್ವಲ್ಪ ಹೊತ್ತಿನಲ್ಲಿಯೇ ಅವರ ಬಾಯಿಯಿಂದ ಮತ್ತು ಮೂಗಿನಿಂದ ರಕ್ತ ಬರಲು ಪ್ರಾರಂಭವಾಯಿತು.  ಅಸ್ವಸ್ಥರಾದ ಅವರನ್ನು  ಕೆಆರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಕುಮಾರ್ ಮಾರ್ಗ ಮಧ್ಯದಲ್ಲಿಯೇ ಮೃತ ಪಟ್ಟಿದ್ದಾನೆ. ಉಳಿದವರಿಬ್ಬರಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲಾಗಿದ್ದು, ಅವರಿಬ್ಬರು ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ. 
 
ಸ್ಥಳಕ್ಕೆ ಭೇಟಿ ನೀಡಿರುವ ಪಿರಿಯಾಪಟ್ಟಣ ಠಾಣಾ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Share this Story:

Follow Webdunia kannada