Webdunia - Bharat's app for daily news and videos

Install App

ರಾಜ್ಯವನ್ನ ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿ ಅಂತ ಸಿದ್ದರಾಮಯ್ಯಗೆ ಶುಭ ಹಾರೈಕೆ

Webdunia
ಗುರುವಾರ, 18 ಮೇ 2023 (17:29 IST)
ದೇವೇಗೌಡರು 91ನೇ ಜನ್ಮ ದಿನಕ್ಕೆ ಕಾಲಿಟ್ಟಿದ್ದಾರೆ.ವೆಂಕಟೇಶ್ವರ ಸನ್ನಿದಾನ, ಅವರ ಆರೋಗ್ಯ ಸಮಸ್ಯೆ ಕೈಮೀರಿದಾಗ ಈ ಕ್ಷೇತ್ರದಲ್ಲಿ ಪೂಜೆ ಮಾಡಿಸ್ತೇವೆ. ದೇವೇಗೌಡರ ಆಯುಷ್ಯಕ್ಕೆ ಇಲ್ಲಿ ಪೂಜೆ ಮಾಡಿಸಲಾಗಿತ್ತು.ಜೀವಕ್ಕೆ ಅಪಾಯ ಬರದಂತೆ ಆಯುಷ್ಯ ಹೋಮ ಮಾಡುವ ಕೆಲಸ ಮಾಡಲಾಗಿದೆ.ಕುಟುಂಬ ಕೂಡ ಅವರ ಆಯುಷ್ಯಕ್ಕೆ ಪೂಜೆ ಮಾಡಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ರು .
 
ಅಲ್ಲದೇ ನನ್ನ ವಯಕ್ತಿಕ ಅಭಿಪ್ರಾಯ ಅವರು ಮನೆಯಲ್ಲಿದ್ದು ಸಲಹೆ ನೀಡಿದ್ರೆ ಸಾಕು.ಅವರು ಚುನಾವಣಾ ಫಲಿತಾಂಶ ಫಲಿತಾಂಶ ಆತಂಕದಲ್ಲಿ ಅವರೇ ನಾಯಕತ್ವ ವಹಿಸೋದು ಬೇಡ.ಯಾಕಂದ್ರೆ ನನಗೆ ಅವರ ಆರೋಗ್ಯ ಮುಖ್ಯ.ನಾವಿನ್ನು ರಾಜಕಾರಣದಲ್ಲಿ ಅಷ್ಟು ಕ್ಷೀಣಿಸಿಲ್ಲ.ಚುನಾವಣೆಯಲ್ಲಿ ಸೋಲು, ಗೆಲುವು ಸರ್ವೇ ಸಾಮಾನ್ಯ.ದೇವೇಗೌಡರು 1989ರಲ್ಲಿ ಎರಡು ಕಡೆ ಸೋತು, ಎರಡೇ ಸ್ಥಾನ ಗೆಲ್ಲಲಾಗಿತ್ತು.ಐದೇ ವರ್ಷದಲ್ಲಿ ಪಕ್ಷ ಸಂಘಟನೆ ಮಾಡಿ, ದೇಶದ ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದ್ರು.ನಮ್ಮ ಪಕ್ಷಕ್ಕೆ ದೊಡ್ಡ ಇತಿಹಾಸ ಇದೆ.ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರಕ್ಕೆ ನಾವು ಬಲಿಯಾಗಿದ್ದೇವೆ.ಮುಂದಿನ ದಿನಗಳಲ್ಲಿ ಜನತೆ ಈಗಿನ ಫಲಿತಾಂಶ ಬಗ್ಗೆ ಅವರಿಗೆ ಮನವರಿಕೆ ಆಗಲಿದೆ.ಜನತಾದಳ ಪಕ್ಷದ ಅನಿವಾರ್ಯತೆ ಬಗ್ಗೆ ಗೊತ್ತಾಗಲಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ರು.
 
ಸಿದ್ದರಾಮಯ್ಯ ಸಿಎಂ ಆಗ್ತಿರೋ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು,ಅವರಿಗೆ ಒಳ್ಳೆಯದಾಗಲಿ, ನೋಡೋಣ ಏನೇನ್ ಮಾಡ್ತಾರೆ ಅಂತ.ಒಳ್ಳೆಯದಾಗ್ಲಿ ಅಂತ ಬಯಸ್ತೀನಿ.ಒಳ್ಳೆಯ ಕಾರ್ಯಕ್ರಮಕ್ಕೆ ಸಹಕಾರ ಇದೆ.ಒಳ್ಳೆಯ ಕಾರ್ಯಕ್ರಮ ಕೊಡಿ ಅಂತ ಸಲಹೆ ನೀಡ್ತೀನಿ.ಜನತೆಗೆ ಹಲವು ಭರವಸೆ ನೀಡಿದ್ದೀರಿ.ಭರವಸೆ ಈಡೇರಿಸಿ.ರಾಜ್ಯವನ್ನ ಅಭಿವೃದ್ಧಿ ಪತದತ್ತ ತೆಗೆದುಕೊಂಡು ಹೋಗಿ ಅಂತ ಶುಭ ಹಾರೈಸ್ತೀನಿ ಎಂದು ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಸ್ರೇಲ್- ಇರಾನ್ ಸಂಘರ್ಷ: ವಿಮಾನಗಳ ಹಾರಾಟ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿದ 18 ಕನ್ನಡಿಗರು

Video: ಪ್ರಿಯಾಂಕಾ ಗಾಂಧಿ ಉದ್ಘಾಟನೆ ಮಾಡಬೇಕೆನ್ನುವಷ್ಟರಲ್ಲಿ ಬಿದ್ದೇ ಹೋಯ್ತು ಫಲಕ

ಅಹಮದಾಬಾದ್‌ ವಿಮಾನ ದುರಂತ: ಇನ್ನೂ ಗುರುತು ಪತ್ತೆಯಾಗದ ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹ

ಚುರುಕುಗೊಂಡ ಮುಂಗಾರು: ಮುಂದಿನ ಮೂರು ದಿನ ವರುಣ ಅಬ್ಬರ, ಆರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಕೇದಾರನಾಥ ಬಳಿ ಹೆಲಿಕಾಪ್ಟರ್ ಅಪಘಾತ: ಪೈಲಟ್ ಸೇರಿ 7 ಮಂದಿ ಸಾವು

ಮುಂದಿನ ಸುದ್ದಿ
Show comments