Webdunia - Bharat's app for daily news and videos

Install App

ಕೇವಲ 1,000 ರೂ.ಗಾಗಿ ವೃದ್ಧನನ್ನು ಚಾಕುವಿನಿಂದ ಇರಿದ್ರು!

Webdunia
ಶುಕ್ರವಾರ, 24 ಫೆಬ್ರವರಿ 2023 (10:25 IST)
ಬೆಂಗಳೂರು : ವಿಳಾಸ ಕೇಳುವ ನೆಪದಲ್ಲಿ ಫಾಲೋ ಮಾಡಿಕೊಂಡು ಬಂದು, ಕೇವಲ ಒಂದು ಸಾವಿರ ಹಣಕ್ಕಾಗಿ ಕರುಳು ಆಚೆ ಬರುವ ಹಾಗೆ ಚಾಕುವಿನಿಂದ ಇರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 
ಸುಕಂದಕಟ್ಟೆಯ ವಿಘ್ನೇಶ್ವರ ನಗರದ ಶಿವಣ್ಣ ಎಂಬ ವೃದ್ಧ ನಡೆದುಕೊಂಡು ಹೋಗುವಾಗ ಈ ಘಟನೆ ನಡೆದಿದೆ. ಕೃಷ್ಣ ಹಾಗೂ ನಿರಂಜನ್ ಬಂಧಿತ ಆರೋಪಿಗಳು. ಒಬ್ಬರೇ ಬರೋದನ್ನೆ ಹೊಂಚುಹಾಕಿ ಕೂತಿದ್ದ ಆಸಾಮಿಗಳಾದ ಕೃಷ್ಣ ಮತ್ತು ನಿರಂಜನ್ ಫಾಲೋ ಮಾಡಿದ್ದರು. ನಿರಂಜನ್ ದೂರದಲ್ಲಿ ನಿಂತಿದ್ದರೇ ಕೃಷ್ಣ ಮಾತ್ರ ವೃದ್ಧ ಶಿವಣ್ಣನ ಜೊತೆಯಲ್ಲೇ ನಡೆದುಕೊಂಡು ಹೋಗುತ್ತಿದ್ದ.

ಶಿವಣ್ಣನ ಬಳಿ ಕೃಷ್ಣ ಬಂದು ಪದೇ ಪದೇ ವಿಳಾಸ ಕೇಳುತ್ತಿದ್ದ. ಇದರಿಂದಾಗಿ ಆ ಶಿವಣ್ಣ ಕೂಡ ಊರಿಗೆ ಹೊಸಬ ಇರಬಹುದು ಎಂದು ಹೇಳಿ ವಿಳಾಸ ಹೇಳಿದ್ದಾನೆ. ಇದಾದ ಬಳಿಕ ಸುತ್ತಮುತ್ತ ಜನ ಇಲ್ಲದ್ದನ್ನು ನೋಡಿದ ಆತ ಶಿವಣ್ಣನ ಹೊಟ್ಟೆಗೆ ಚಾಕುವಿನಿಂದ ಇರಿದ್ದಿದ್ದಾನೆ. ಅದಾದ ಬಳಿಕ ಶಿವಣ್ಣನ ಜೇಬಿನಲ್ಲಿದ್ದ 1 ಸಾವಿರ ರೂ. ಹಣವನ್ನು ಕಸಿದು ಪರಾರಿಯಾಗಿದ್ದಾನೆ. ಚಾಕು ಇರಿದ ರಭಸಕ್ಕೆ ಹೊಟ್ಟೆಯಲ್ಲಿದ್ದ ಕರುಳೇ ಹೊರಬಂದಿತ್ತು. ತಕ್ಷಣ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆ ವೇಳೆ ದುರಾದೃಷ್ಟಕ್ಕೆ ಏರಿಯಾದಲ್ಲಿ ಕರೆಂಟ್ ಹೋಗಿತ್ತು. ಅಷ್ಟೇ ಅಲ್ಲದೇ ವೃದ್ಧ ಬೆಳಗ್ಗೆ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿದ್ರೆ ಸಂಜೆ ತರಕಾರಿ ವ್ಯಾಪಾರ ಮಾಡುತ್ತಿದ್ದರು. ಸದ್ಯ ಆಸ್ಪತ್ರೆ ಖರ್ಚು 3 ಲಕ್ಷ ಆಗಿದ್ದು, ಪರದಾಡುತ್ತಿದ್ದಾರೆ.

ಒಂದು ವಾರ ನಿರಂತರ ಪರಿಶ್ರಮದಿಂದಾಗಿ ಕೃಷ್ಣ ಹಾಗೂ ನಿರಂಜನ್ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಚಾಕು, ಕಳ್ಳತನ ಮಾಡಿದ್ದ 3 ದ್ವಿಚಕ್ರ ವಾಹನ, ನಗದು ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಪ್ತಾಪ್ತೆ ಮೇಲೆ ನಿರಂತರ ರೇಪ್ ಮಾಡಿ, ಗರ್ಭಪಾತ: ಪುತ್ತೂರಿನ 7 ವರ್ಷಗಳ ಹಿಂದಿನ ಪ್ರಕರಣಕ್ಕೆ ತೀರ್ಪು ಪ್ರಕಟ

ಮತಗಳ್ಳತನ: ರಾಹುಲ್ ನೇತೃತ್ವದಲ್ಲಿ ಆ.5 ರಂದು ಪ್ರತಿಭಟನೆ, ಡಿಕೆ ಶಿವಕುಮಾರ್

ತಮಿಳುನಾಡು ಬಿಜೆಪಿ ಉಪಾಧ್ಯಕ್ಷೆತಾಗಿ ನಟಿ ಖುಷ್ಬು ಸುಂದರ್‌ ಜವಾಬ್ದಾರಿ

ಆರಾಮಾಗಿ ನಡೆದುಕೊಂಡು ಹೋಗುತ್ತಿರುವಾಗಲೇ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಸೂಸೈಡ್‌, ಭಯಾನಕ ವಿಡಿಯೋ

ಅಕ್ಟೋಬರ್‌ನಲ್ಲಿ ಸಿಎಂ ಬದಲಾವಣೆ ಪಕ್ಕಾ, ಖರ್ಗೆ ಸರಿಯಾದ ಸಮಯಕ್ಕೆ ಕಲ್ಲು ಹೊಡೆದಿದ್ದಾರೆ: ಆರ್‌ ಅಶೋಕ್‌

ಮುಂದಿನ ಸುದ್ದಿ
Show comments