ಅವನು ರೈಲು ಹೋದ ಮೇಲೆ ಟಿಕೆಟ್ ತಗೊಂಡಿದ್ದ: ಯೋಗೇಶ್ವರ್ ಬಗ್ಗೆ ವಿ. ಸೋಮಣ್ಣ ಮಾತು

Sampriya
ಶನಿವಾರ, 16 ನವೆಂಬರ್ 2024 (18:00 IST)
Photo Courtesy X
ಬೆಂಗಳೂರು: ಗೆಲ್ಲುವ ವಿಶ್ವಾಸಕ್ಕಿಂತ ಹಿನ್ನಡೆ ಬಗ್ಗೆ ಮಾತನಾಡುವ ಮೂಲಕ ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸತ್ಯ ಮಾತನಾಡಿದ್ದಾರೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.

ಸುದ್ಧಿಗಾರರ ಜೊತೆಗೆ ಶನಿವಾರ ಮಾತನಾಡಿ, . ಅವನು ರೈಲು ಹೋದ ಮೇಲೆ ಟಿಕೆಟ್ ತಗೊಂಡಿದ್ದ. 'ಅವನು ನನಗೆ ತುಂಬಾ ಬೇಕಾದವನು. ಪ್ರತಿ ಬಾರಿ ತನ್ನ ಜೇಬಿನಿಂದ ಖರ್ಚು ಮಾಡದೇ ಚುನಾವಣೆ ನಡೆಸುತಿದ್ದ. ಈ ಬಾರಿ ಎಡವಟ್ಟು ಮಾಡ್ಕೊಂಡಿದ್ದಾನೆ' ಎಂದು ಹೇಳಿದರು.

ಚನ್ನಪಟ್ಟಣ, ಶಿಗ್ಗಾವಿ ನಾವು ಗೆದ್ದಾಗಿದೆ. ಸಂಡೂರು ತೀವ್ರ ಸ್ಪರ್ಧೆ ಇದ್ದರೂ ನಾವೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸವಿದೆ. ಇದು ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ. ಆಡಳಿತ ನಡೆಸುವುದು ಬಿಟ್ಟು ಚುನಾವಣೆಯಲ್ಲಿ ಮುಳುಗಿದರು. ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಹಗರಣಗಳಲ್ಲಿ ಮುಳುಗಿದರು ಎಂದು ಟೀಕಿಸಿದರು.

ವಕ್ಫ್ ವಿವಾದ: ಬುದ್ಧಿವಂತರು ಜಾಸ್ತಿ ಇರುವಲ್ಲಿ ವಿವಾದ ಇರ್ತದೆ. ಆದರೆ ವಕ್ಫ್ ವಿರುದ್ಧದ ಹೋರಾಟ ಧ್ವನಿ ಒಂದೇ ಆಗಿದೆ. ಉಪ ಚುನಾವಣೆ ಫಲಿತಾಂಶ ಬಂದ ಮೇಲೆ ಎಲ್ಲ ಬಣ ಒಂದಾಗುತ್ತವೆ ಎಂದು ಪ್ರತಿಕ್ರಿಯಿಸಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿದ್ದರಾಮಯ್ಯ, ಡಿಕೆಶಿ ನಡುವಿನ ಪವರ್ ವಾರ್ ಮತ್ತೊಂದು ಹಂತಕ್ಕೆ: ಸಿಎಂ ಹೊಸ ಟ್ವೀಟ್ ನಲ್ಲಿ ಏನಿದೆ

ನಮ್ಮಪ್ಪ ಯಾವುದೇ ಹಗರಣ ಮಾಡಿಲ್ಲ, ಐದು ವರ್ಷವೂ ಅವರೇ ಸಿಎಂ: ಸಿದ್ದರಾಮಯ್ಯ ಪುತ್ರ ಯತೀಂದ್ರ

ಐಎಎಸ್ ಅಧಿಕಾರಿ ಮಹಂತೇಶ ಬೀಳಗಿ ಕುಟುಂಬಕ್ಕೆ ಉದ್ಯೋಗ ಕೊಡಲು ವಿಜಯೇಂದ್ರ ಸರ್ಕಾರಕ್ಕೆ ಪತ್ರ

ಡಿಕೆ ಶಿವಕುಮಾರ್ ಗೆ ಸಿಎಂ ಕಟ್ಟಿದರೆ ಹೈಕಮಾಂಡ್ ಗೆ ಶುರುವಾಗಿದೆ ಈ ಭಯ

ಮೋದಿ ಬರುತ್ತಿದ್ದಾರೆಂದು ಉಡುಪಿಯಲ್ಲಿ ಫುಲ್ ಆಕ್ಟಿವ್ ಆದ ಬಿಜೆಪಿ ನಾಯಕರು

ಮುಂದಿನ ಸುದ್ದಿ
Show comments