Webdunia - Bharat's app for daily news and videos

Install App

ಕೊಲೆ ಮಾಡಿ ಆತ್ಮಹತ್ಯೆಯ ಹೈ ಡ್ರಾಮ‌ ಕ್ರಿಯೇಟ್ ಮಾಡಿದ್ದ

Webdunia
ಶುಕ್ರವಾರ, 28 ಜುಲೈ 2023 (19:41 IST)
ಸಪ್ತಪದಿ ತುಳಿದು ಜೀವನಪರ್ಯಂತ ಜೊತೆಗಿರ್ತೇನೆ ಎಂದಿದ್ದ, ಇವನೇ ನನ್ನ ಸರ್ವಸ್ವ ಅಂತ ನಂಬಿ ಬಂದಿದ್ದಾಕೆ, ಕೇವಲ ಒಂದೂವರೇ ವರ್ಷಕ್ಕೆ ಸಂಸಾರದ ನೌಕೆಯನ್ನ ಮುಳುಗಿಸಿದ ಗಂಡ ಮಡದಿಯನ್ನ ಬಾರದ ಲೋಕಕ್ಕೆ ಕಳುಹಿಸಿದ್ದಾನೆ.ಸಿಲಿಕಾನ್ ಸಿಟಿಗೆ ಬಂದು, ಬಾಣಸವಾಡಿಯ ಹೆಚ್ ಆರ್ ಬಿಆರ್ ಲೇಔಟ್ ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ‌ಎಲ್ಲಾವೂ ಚೆನ್ನಾಗಿಯೇ ಇತ್ತು, ಯಾಕೋ ಬರ್ತ ಬರ್ತಾ ಇಬ್ಬರ ಮದ್ಯೇ ಕಿರಿಕ್ ಶುರುವಾಗಿತ್ತು ಸಂಸಾದರಲ್ಲಿ ಕೂಡ ಬಿರುಕು ಮೂಡಿತ್ತು.

ಇತ್ತೀಚೆಗೆ ಸಂಸಾರದಲ್ಲಿ ಜಗಳ ಸಾಮಾನ್ಯವಾಗಿತ್ತು ಇದರಿಂದ ಕುಪಿತಗೊಂಡಿದ್ದ ಸಿದ್ದಪ್ಪ ಬಸವರಾಜ್ ನಿನ್ನೆ ಕೆಂಚಮ್ಮಳ ಉಸಿರುಗಟ್ಟಿಸಿ ಹತ್ಯೆ ಮಾಡಿ ಪ್ಯಾನಿಗೆ ನೇಣು ಹಾಕಿಕೊಂಡಿರುವ ಹಾಗೇ  ಕ್ರೈಂ‌ಸೀನ್ ಕ್ರಿಯೆಟ್ ಮಾಡಿದ್ದ ನಂತರ ಕೆಂಚಮ್ಮಳ ಅಮ್ಮನಿಗೆ ಕರೆ ಮಾಡಿ ನಿಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಹೇಳಿ ಕರೆಸಿದ್ದ ಇನ್ನೂ ಇವರ ಸಂಸಾರದ ‌ಜಗಳದ ಬಗ್ಗೆ ಮಗಳು ಕೂಡ ಸಾಕಷ್ಟು ಸಲ ಹೇಳಿಕೊಂಡಿದ್ದಳು ಇದರಿಂದ ‌ಅನುಮಾನಗೊಂಡು ಬಾಣಸವಾಡಿ ಪೊಲೀಸರಿಗೆ ದೂರ.ಪ್ರಕರಣ ದಾಖಲಿಸಿಕೊಂಡಿ ತನಿಖೆ ಮಾಡಿದ ಪೊಲೀಸರ ‌ಮುಂದೆ ಮೊದಲು ಆತ್ಮಹತ್ಯೆ ಅಂತಾನೇ ಹೇಳಿದ್ದಾನೆ ಆದ್ರೇ ಪೊಲೀಸರ ವರ್ಸೆ ತೋರಿಸಿದ ನಂತರ ಕೊಲೆ ಮಾಡಿರೋದಾಗಿ‌ ಒಪ್ಪಿಕೊಂಡಿದ್ದಾನೆ. ಜೀವನ‌ ಪೂರ್ತಿ ಜೊತೆ ಯಲ್ಲಿ ಇರ್ತೇನೆ ಅಂದವನು ಉಸಿರು ನಿಲ್ಲಿಸಿದ್ದು ಮಾತ್ರ ದುರಂತವೇ ಸರಿ.
 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಮ್ಮ ಮೆಟ್ರೊ ಹಳದಿ ಮಾರ್ಗ ಲೋಕಾರ್ಪಣೆಗೆ ದಿನಗಣನೆ: ಪ್ರಧಾನಿ ಮೋದಿಯಿಂದ ಗ್ರೀನ್‌ಸಿಗ್ನಲ್‌

ನರ್ಸ್ ನಿಮಿಷಾ ಪ್ರಿಯಾ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮರಣದಂಡನೆ ಶಿಕ್ಷೆ ಇನ್ನೂ ರದ್ದಾಗಿಲ್ಲ ಎಂದ ಎಂಇಎ

2019 ರಲ್ಲಿ ತೀರಿಕೊಂಡಿದ್ದ ಅರುಣ್ ಜೇಟ್ಲಿ 2020 ರಲ್ಲಿ ಬೆದರಿಕೆ ರಾಹುಲ್ ಗಾಂಧಿಗೆ ಬೆದರಿಕೆ ಹಾಕಿದ್ರಂತೆ

ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ, ಕಣ್ಣೀರು ಹಾಕಿದ ಅಜ್ಜ ದೇವೇಗೌಡ

ರಾಹುಲ್ ಗಾಂಧಿಯಿಂದ ಮತಗಳ್ಳತನ ಆರೋಪ: ಕಾಂಗ್ರೆಸ್ ಪ್ರತಿಭಟನೆಗೆ ಪ್ರತಿತಂತ್ರ ಹೂಡಿದ ಬಿಜೆಪಿ

ಮುಂದಿನ ಸುದ್ದಿ
Show comments