Webdunia - Bharat's app for daily news and videos

Install App

ಸಾವಿನ ಗಳಿಗೆಯಲ್ಲೂ ತನ್ನ ಅಂಗಾಂಗ ದಾನ ಮಾಡುವಂತೆ ಹೇಳಿ ಕಣ್ಮುಚ್ಚಿದ

Webdunia
ಮಂಗಳವಾರ, 16 ಫೆಬ್ರವರಿ 2016 (18:04 IST)
ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ  ಬೈಕ್ ಸವಾರ  ಸಾವಿನ ಅಂಚಿನಲ್ಲಿದ್ದರೂ ಹೃದಯವೈಶಾಲ್ಯತೆ ಮೆರೆದಿದ್ದು, ಸಾವಿನ ಕೊನೆಗಳಿಗೆಯಲ್ಲೂ ತನ್ನ ಅಂಗಾಂಗಗಳನ್ನು ದಾನ ಮಾಡುವಂತೆ ಹೇಳಿ ಯುವಕ ಪ್ರಾಣಬಿಟ್ಟಿದ್ದಾನೆ.

ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ವ್ಯಕ್ತಿ ಹರೀಶ್ ತನ್ನ ಅಂಗಾಂಗ ದಾನ ಮಾಡುವಂತೆ ಹೇಳಿ ಸಾವನ್ನಪ್ಪಿದ. ನೆಲಮಂಗಲದಲ್ಲಿ ಬೈಕ್ ಸವಾರನಿಗೆ ಲಾರಿ ಡಿಕ್ಕಿ ಹೊಡೆದು ದೇಹವೇ ಎರಡು ತುಂಡಾಗಿತ್ತು. 
 
ನೆಲಮಂಗಲದ ಬೇಗೂರಿನ ಬಳಿ ನಡೆದ ಈ ಭೀಕರ ಅಪಘಾತದಲ್ಲಿ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿದ್ದ ಹರೀಶ್ ದೇಹ ಎರಡು ತುಂಡಾಗಿ ರಸ್ತೆಯ ಮೇಲೆ ಬಿದ್ದಿದೆ. ಆದರೆ ಅರ್ಧ ದೇಹ ತುಂಡಾದರೂ ಕೂಡ ಹರೀಶ್ ಜೀವಂತವಾಗಿದ್ದರು.ಸೊಂಟದ ಒಂದು ಭಾಗ ಒಂದು ಕಡೆ ಬಿದ್ದಿದ್ದರೆ ಇನ್ನರ್ಧ ರುಂಡ ಸಮೇತ ಮುಂಡದ ಭಾಗ ಇನ್ನೊಂದು ಕಡೆ ಬಿದ್ದಿತ್ತು.

ಯುವಕನ ದೇಹ ಎರಡು ಹೋಳಾಗಿದ್ದರೂ ಕೈಗಳನ್ನು ಮೇಲೆತ್ತಿ ಜೀವವುಳಿಸುವಂತೆ ಅಂಗಲಾಚಿದ. ಸಾವು ನಿಶ್ಚಿತವೆಂದು ತಿಳಿದಮೇಲೆ  ತನ್ನ ಬಳಿ ನಿಂತಿದ್ದ ಜನರಿಗೆ ಸತ್ತಮೇಲಾದರೂ ತನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ಹೇಳುವ ಮೂಲಕ ಹೃದಯವೈಶ್ಯಾಲ್ಯತೆ ಮೆರೆದಿದ್ದ. ಇಂತಹ ಘಟನೆಯನ್ನು ನಾನೆಂದೂ ಕೇಳಿಲ್ಲ. ಹೆಲ್ಮೆಟ್ ಧರಿಸಿದ್ದರಿಂದ ಮೆದುಳು, ಕಣ್ಣಿಗೆ ತೊಂದರೆಯಾಗಿಲ್ಲ. ಮೃತಪಟ್ಟ 6 ಗಂಟೆಯೊಳಗೆ ಕಣ್ಣನ್ನು ದಾನ ಮಾಡಬಹುದು ಎಂದು ನಾರಾಯಣ ನೇತ್ರಾಲಯದ ಮುಖ್ಯಸ್ಥ ಭುಜಂಗ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. 
 

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments