Select Your Language

Notifications

webdunia
webdunia
webdunia
webdunia

ಸಾಲ ತೀರಿಸಿದ್ದರೂ ಬಡ್ಡಿ ಕಟ್ಟುವಂತೆ ಕಿರುಕುಳ: ಕೊಟ್ರೇಶಪ್ಪ ದೂರು

ಸಾಲ ತೀರಿಸಿದ್ದರೂ ಬಡ್ಡಿ ಕಟ್ಟುವಂತೆ ಕಿರುಕುಳ: ಕೊಟ್ರೇಶಪ್ಪ ದೂರು
ಬೆಂಗಳೂರು , ಶನಿವಾರ, 28 ನವೆಂಬರ್ 2015 (12:48 IST)
ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಬೇಕಿದ್ದ ಪೊಲೀಸ್ ಪೇದೆ ಮಂಜುನಾಥ ಬಡ್ಡಿ ಕಟ್ಟುವಂತೆ ನೀಡಿದ  ಕಿರುಕುಳದಿಂದ ಬೇಸತ್ತ ಕೊಟ್ರೇಶಪ್ಪ ಈ ಕುರಿತು ದೂರು ನೀಡಿದ್ದಾರೆ. ಮಂಜುನಾಥನ ಕಿರುಕುಳ ತಾಳದೇ ಕೊಟ್ರೇಶಪ್ಪ  2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಅಸಲು, ಬಡ್ಡಿ ನೀಡಿದ್ರೂ ಕಿರುಕುಳ ನೀಡುತ್ತಿದ್ದರೆಂದು ಕೊಟ್ರೇಶಪ್ಪನ ಪತ್ನಿ ಆರೋಪಿಸಿದ್ದಾರೆ.  

ಮಂಜುನಾಥ್ ಮತ್ತು ಕೊಟ್ರೇಶ್ ಆಪ್ತ ಸ್ನೇಹಿತರಾಗಿದ್ದು, ರೈಲ್ವೆ ಪೊಲೀಸರಾಗಿ ಕೆಲಸ ನಿರ್ವಹಿಸುತ್ತಿದ್ದರು.  ಕೊಟ್ರೇಶಪ್ಪ ತನ್ನ ವ್ಯವಹಾರಕ್ಕಾಗಿ 14 ಲಕ್ಷ ರೂ.ಹಣವನ್ನು ಮಂಜುನಾಥ್‌ರಿಂದ ಪಡೆದು ಶೇ. 5ರ ಬಡ್ಡಿದರದಲ್ಲಿ ಕಟ್ಟುತ್ತಿದ್ದರು. ಈ ಕುರಿತು ಮಂಜುನಾಥ್ ಕೊಟ್ರೇಶ್‌ಗೆ ತೀವ್ರ ಕಿರುಕುಳ ನೀಡುತ್ತಿದ್ದರೆಂದು ಹೇಳಲಾಗಿದೆ.

 ಕಿರುಕುಳದಿಂದ ಬೇಸತ್ತು ಎರಡು ಮೂರು ಮಂಜುನಾಥ್ ಆತ್ಮಹತ್ಯೆಗೂ ಯತ್ನಿಸಿದ್ದರಿಂದ ಕೊಟ್ರೇಶಪ್ಪನ ಪತ್ನಿ ಕುಟುಂಬ ತಮ್ಮ ಮನೆಯನ್ನು ಮಾರಿ ಮಂಜುನಾಥ್ ಸಾಲವನ್ನು ತೀರಿಸಿದ್ದರು. ಆದರೆ ಸಾಲವನ್ನು ತೀರಿಸಿದ ಮೇಲೂ ಇನ್ನೂ ಬಡ್ಡಿಕಟ್ಟಬೇಕೆಂದು ಮಂಜುನಾಥ್ ಕಿರುಕುಳ ನೀಡುತ್ತಿದ್ದಾರೆಂದು ಕೊಟ್ರೇಶಪ್ಪ ಆರೋಪಿಸಿದ್ದಾರೆ. 

Share this Story:

Follow Webdunia kannada