Webdunia - Bharat's app for daily news and videos

Install App

ಪುತ್ರ ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರ ಜತೆಯೂ ಅಫೇರ್ ಇರಲಿಲ್ಲ:ಹರೀಶ್ ತಂದೆ

Webdunia
ಗುರುವಾರ, 18 ಫೆಬ್ರವರಿ 2016 (19:11 IST)
ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಹರೀಶ್‌ ಆತ್ಮಹತ್ಯೆ ಮಾಡಿಕೊಂಡಿಲ್ಲ ಯಾರ ಜತೆಯೂ ಅಫೇರ್ ಇರಲಿಲ್ಲ ಎಂದು ಹರೀಶ್ ತಂದೆ ನಾಗರಾಜ ಹೇಳಿದ್ದಾರೆ.
 
ಕಳೆದ ಭಾನುವಾರ, ಸೋಮುವಾರ ಮತ್ತು ಮಂಗಳವಾರದಂದು ನಾನು ಅವನ ಜೊತೆಗೆ ಇದ್ದೆ. ನಿನ್ನೆ ಕಾಂಚಿಪುರಂ ಕೋರ್ಟ್‌ಗೆ ಹೋಗಬೇಕು ಎಂದು ಹೇಳಿದ್ದಾಗಿ ತಿಳಿಸಿದ್ದ. ಆದರೆ, ಇಂದು ಮಗನ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ ಎಂದು ಹೇಳಿದ್ದಾರೆ.
 
ಮಾರ್ಚ್ 29 ಕ್ಕೆ ಹರೀಶ್ ವಿವಾಹ ದಿನಾಂಕ ನಿಗದಿಪಡಿಸಲಾಗಿತ್ತು. ಮಹಿಳಾ ಐಎಎಸ್ ಅಧಿಕಾರಿಯ ಜೊತೆ ಅಫೇರ್ ಇತ್ತು ಎನ್ನುವುದನ್ನು ಅವರು ತಳ್ಳಿಹಾಕಿದ್ದಾರೆ.
 
ಮಗನ ಮೃತದೇಹ ತೆಗೆದುಕೊಂಡು ಹೋಗಲು ಬೆಂಗಳೂರಿನಿಂದ ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ಆಗಮಿಸಿದ್ದ ಹರೀಶ್ ತಂದೆ ನಾಗರಾಜ, ಮಗನನ್ನು ಕಂಡು ಕಣ್ಣೀರಿಟ್ಟರು.ಮಗನ ಮೃತದೇಹ ನೋಡಿದಲ್ಲಿ ಆತ್ಮಹತ್ಯೆ ಎಂದು ಕಾಣುವುದಿಲ್ಲವೆಂದು  ಸಂಶಯ ವ್ಯಕ್ತಪಡಿಸಿದರು. 
 
ಇತ್ತೀಚೆಗಷ್ಟೆ ಹರೀಶ್‌ಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಮಧುರೈನಿಂದ ಚೆನ್ನೈಗೆ ವರ್ಗವಾಗಿದ್ದಕ್ಕೆ ಬೇಸರಗೊಂಡು ಆತ್ಮಹತ್ಯೆಗೆ ಶರಣಾಗಿರಬಹುದು. ಆದರೆ, ಪೋಸ್ಟ್ ಮಾರ್ಟಂ ನಂತರ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments