Select Your Language

Notifications

webdunia
webdunia
webdunia
webdunia

ದೇವೇಗೌಡರಿಗೆ ಜ್ಞಾನೋದಯವಾದಂತಾಗಿದೆ:ಸಚಿವ ಮಂಜು

ದೇವೇಗೌಡರಿಗೆ ಜ್ಞಾನೋದಯವಾದಂತಾಗಿದೆ:ಸಚಿವ ಮಂಜು
ಹಾಸನ , ಬುಧವಾರ, 27 ಏಪ್ರಿಲ್ 2016 (16:00 IST)
ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದ ಘಟನೆಯಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಜ್ಞಾನೋದಯವಾದಂತಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಲೇವಡಿ ಮಾಡಿದ್ದಾರೆ. 
 
ಸಿಗರನಹಳ್ಳಿ ದೇವೇಗೌಡರು ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಆದಾಗ್ಯೂ ಅವರಿಗೆ ಶಾಂತಿ ಕಾಪಾಡಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಗ್ರಾಮದಲ್ಲಿ ದಲಿತರು ಸವರ್ಣಿಯರ ಮಧ್ಯೆ ಘರ್ಷಣೆ ನಡೆದಿಲ್ಲ ಅಧಿಕಾರಿಗಳು ದಲಿತ ಸಮುದಾಯದ ಜನತೆಯ ನಡುವೆ ಘರ್ಷಣೆ ನಡೆದಿದೆ ಎಂದು ಸಚಿವರು ತಿಳಿಸಿದ್ದಾರೆ.
 
ದೇವೇಗೌಡರ ಪುತ್ರ ಎಚ್‌.‍ಡಿ. ರೇವಣ್ಣ ಪ್ರತಿನಿಧಿಸುವ ಕ್ಷೇತ್ರದ ವ್ಯಾಪ್ತಿಗೆ ಸಿಗರನಹಳ್ಳಿ ಬಂದಿದ್ದರೂ ಘರ್ಷಣೆ ತಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಿಲ್ಲ ಎಂದು ಸಚಿವ ಎ.ಮಂಜು ಆರೋಪಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.  

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ವಿರುದ್ಧ ಗ್ರಾಮಸ್ಥರು ಗರಂ