ಜಿಟಿ ಮಾಲ್ ಬಂದ್: ಇದಪ್ಪಾ ರೈತರ ತಾಕತ್ತು

Krishnaveni K
ಶುಕ್ರವಾರ, 19 ಜುಲೈ 2024 (09:59 IST)
Photo Credit: X
ಬೆಂಗಳೂರು: ಪಂಚೆ ಉಟ್ಟುಕೊಂಡು ಬಂದಿದ್ದ ಹಾವೇರಿ ಮೂಲದ ರೈತನನ್ನು ಒಳಗೆ ಬಿಡದೇ ಅವಮಾನಿಸಿದ ಮಾಗಡಿ ರಸ್ತೆಯ ಜಿಟಿ ಮಾಲ್ ಈಗ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಮತ್ತೊಮ್ಮೆ ಕ್ಷಮೆ  ಯಾಚಿಸಿದೆ. ಇದನ್ನು ನೋಡಿ ನೆಟ್ಟಿಗರು ಇದಪ್ಪಾ ರೈತರ ತಾಕತ್ತು ಎಂದಿದ್ದಾರೆ.

ಈ ವಿಚಾರ ನಿನ್ನೆ ಸದನದಲ್ಲೂ ಪ್ರಸ್ತಾಪವಾಗಿತ್ತು. 7 ದಿನ ಮಾಲ್ ಬಂದ್ ಮಾಡಿಸುವುದಾಗಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿದ್ದರು. ಅಲ್ಲದೆ, ಈ ಬಗ್ಗೆ ಬಿಬಿಎಂಪಿ ಕಮಿಷನರ್ ಜೊತೆ ಮಾತನಾಡುವುದಾಗಿಯೂ ಹೇಳಿದ್ದರು. ಅದರಂತೆ ಇದೀಗ ಬಿಬಿಎಂಪಿ ಕಮಿಷನರ್ ಮಾಲ್ ಮಾಲಿಕರಿಗೆ ಸೂಚನೆ ನೀಡಿದ್ದಾರೆ.

ಬಿಬಿಎಂಪಿಯಿಂದ ಸೂಚನೆ ಬಂದ ಬೆನ್ನಲ್ಲೇ ಜಿಟಿ ಮಾಲ್ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿದ್ದಲ್ಲದೆ ಮತ್ತೊಮ್ಮೆರೈತನಿಗೆ ಕ್ಷಮೆ ಯಾಚನೆ ಮಾಡಿದೆ. ಅಷ್ಟೇ ಅಲ್ಲ ರೈತ ಫಕೀರಪ್ಪನ ಬಳಿ ಹೋಗಿ ವೈಯಕ್ತಿಕವಾಗಿ ನಾವೇ ಕ್ಷಮೆ ಕೇಳುತ್ತೇವೆ. ನಮಗೆ ಎರಡು ದಿನ ಕಾಲಾವಕಾಶ ಕೊಡಿ ಎಂದು ಮಾಲಿಕರು ಹೇಳಿದ್ದಾರೆ. ಸದ್ಯಕ್ಕೆ ಎಷ್ಟು ದಿನ ಎಂಬುದು ಸ್ಪಷ್ಟವಾಗಿಲ್ಲ.

ಇನ್ನು ಮಾಲ್ ಬಂದ್ ಆಗಿರುವ ಸುದ್ದಿ ತಿಳಿಯುತ್ತಿದ್ದಂತೇ ಪ್ರತಿಕ್ರಿಯಿಸಿರುವ ನೆಟ್ಟಿಗರು ಇದಪ್ಪಾ ರೈತರ ತಾಕತ್ತು ಎಂದರೆ. ರೈತರನ್ನು ಕೆಣಕಿ ಯಾರೂ ಈ ದೇಶದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ. ಮುಂದೆ ಇಂತಹ ಕೃತ್ಯವೆಸಗುವವರಿಗೆಲ್ಲಾ ಇದು ಪಾಠವಾಗಲಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಛತ್ತೀಸ್‌ಗಢ್: ಅಮಿತ್ ಶಾ ಗುಡುಗಿದ ಬೆನ್ನಲ್ಲೇ ಊಹೆಗೂ ಮೀರಿದ ನಕ್ಸಲರು ಶರಣು

ಜಾರ್ಖಂಡ್: ಥಲಸ್ಸೆಮಿಯಾದಿಂದ ಬಳಲುತ್ತಿದ್ದ 5 ಮಕ್ಕಳಿಗೆ ರಕ್ತ ನೀಡಿದ ಬಳಿಕ ಎಚ್‌ಐವಿ ಪಾಸಿಟಿವ್‌

ಚೀನಾ, ಭಾರತ ನಡುವೆ ನೇರ ವಿಮಾನ ಹಾರಾಟ ಶುರು

ಕರ್ನೂಲ್ ಬಸ್ ದುರಂತ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರದಿಂದ ಹೊಸ ರೂಲ್ಸ್‌

ನಮ್ಮನ್ನು ಟೀಕಿಸುತ್ತಾರೆಂದು ಸುಮ್ಮನೇ ಬಿಡಲು ಸಾಧ್ಯವಿಲ್ಲ: ಮಜುಂದೂರ್ ಬಗ್ಗೆ ಡಿಕೆಶಿ ಹೀಗಂದ್ರು

ಮುಂದಿನ ಸುದ್ದಿ
Show comments