Select Your Language

Notifications

webdunia
webdunia
webdunia
webdunia

ಗ್ರಾಮ ಪಂಚಾಯತ್ ಅಭ್ಯರ್ಥಿಯ ಶವ ಪತ್ತೆ, ಕೊಲೆ ಶಂಕೆ

ಗ್ರಾಮ ಪಂಚಾಯತ್ ಅಭ್ಯರ್ಥಿಯ  ಶವ ಪತ್ತೆ, ಕೊಲೆ ಶಂಕೆ
ಕೊಳ್ಳೇಗಾಲ , ಸೋಮವಾರ, 25 ಮೇ 2015 (09:51 IST)
ಕೊಳ್ಳೆಗಾಲದ ಪಿ.ಗುಂಡಾಪುರ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಶವ ನೇಣು ಬೀಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅವನ್ನು ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ನಾಗರಾಜ್ ಎಂದು ಗುರುತಿಸಲಾಗಿದೆ.

25 ವರ್ಷದ ನಾಗರಾಜ್ ಮಂಗಲ ಗ್ರಾಮದ ನಿವಾಸಿಯಾಗಿದ್ದು ಅಲಗುಮೂಲೆ ದೇವಾಲಯದ ಬಳಿಯ ಮರದಲ್ಲಿ ಅವರು ಇಂದು ಬೆಳಿಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
 
ನಿನ್ನೆ ರಾತ್ರಿಯಿಂದ ಅವರು ಮನೆಯಿಂದ ಕಾಣೆಯಾಗಿದ್ದರು. ರಾತ್ರಿ ಎಷ್ಟು ಹುಡುಕಿದರೂ ಅವರು ಪತ್ತೆಯಾಗಿರಲಿಲ್ಲ. 
 
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ನಾಗರಾಜ್ ಅವರನ್ನು ಕೊಲೆ ಮಾಡಿ ನೇಣು ಹಾಕಲಾಗಿದೆ. ಇದು ರಾಜಕೀಯ ಪ್ರೇರಿತ ಎಂದು ಅವರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಇದು ಕೊಲೆಯೋ, ಆತ್ಮಹತ್ಯಯೋ ಎಂದು ಸ್ಪಷ್ಟಗೊಳ್ಳಲಿದೆ. 
 
ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೊಳ್ಳೆಗಾಲ ಸಿಪಿಐ ಸಹ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. 

Share this Story:

Follow Webdunia kannada