Webdunia - Bharat's app for daily news and videos

Install App

ಸಮಾವೇಶದಲ್ಲಿ ಜಮೀರ್ ಅಹ್ಮದ್ ವಿರುದ್ಧ ಗರಂ ಆದ ಗೌಡರು

Webdunia
ಶನಿವಾರ, 24 ಜನವರಿ 2015 (15:46 IST)
ಜೆಡಿಎಸ್ ಪಕ್ಷ ಸಂಘಟನೆಗೆ ಪಣತೊಟ್ಟು ಇಂದು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಪಕ್ಷದ ವರಿಷ್ಠ ದೇವೇಗೌಡರು ಮಾತನಾಡಿದ್ದು, ಸಿದ್ದರಾಮಯ್ಯನವರು ದೌರ್ಭಾಗ್ಯವೊಂದನ್ನು ಬಿಟ್ಟು ಎಲ್ಲಾ ಭಾಗ್ಯವನ್ನೂ ಕೊಟ್ಟಿದ್ದಾರೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. 
 
ಸಮಾರಂಭದಲ್ಲಿ ಮಾತನಾಡಿದ ಗೌಡರು, ಸಮಾವೇಶದಲ್ಲಿ ಭಾಗವಹಿಸುವಂತೆ ಪಕ್ಷದ ಎಲ್ಲಾ ನಾಯಕರಿಗೆ ಕಟ್ಟುನಿಟ್ಟಾಗಿ ಆದೇಶಿಸಿದ್ದರೂ ಕೆಲವರು ನನಗೆ ಆಹ್ವಾನ ಬರಲಿಲ್ಲ ಎಂದು ಹೇಳುತ್ತಿದ್ದಾರೆ. ನಾನು ಆಗೊಮ್ಮೆ ತೋಟ ಮಾರಬೇಕೆಂದಿದ್ದೆ, ಆದರೆ ಯಾರೋ ಒಬ್ಬರು ಬಂದು ಓಲ್ವೋ ಬಸ್ಸಿನಲ್ಲಿ ಕರೆದುಕೊಂಡು ಹೋದರು ಎನ್ನುವ ಮೂಲಕ ಆಹ್ವಾನ ಬರಲಿಲ್ಲ ಎಂದು ಹೇಳಿ ಗೈರು ಹಾಜರಾಗಿದ್ದ ಶಾಸಕ ಜಮೀರ್ ಅಹ್ಮದ್ ವಿರುದ್ಧ ಮಾರ್ಮಿಕವಾಗಿ ಚಾಟಿ ಬೀಸಿದರು. 
 
ಬಳಿಕ, ಭಿನ್ನ ಮತೀಯರನ್ನು ಪಕ್ಷಕ್ಕೆ ಕರೆ ತರುವಲ್ಲಿ ಕುಮಾರಸ್ವಾಮಿ ಪದೇ ಪದೇ ಮುಂದಾಗುತ್ತಿದ್ದು, ಇಂತಹ ವರ್ತನೆಯನ್ನು ಇನ್ನುಮುಂದೆ ಕೈ ಬಿಡಬೇಕು. ಭಿನ್ನಮತೀಯರನ್ನು ಓಲೈಸುವ ಕಾರ್ಯಕ್ಕೆ ಮತ್ತೆಂದೂ ಮುಂದಗಬಾರದು ಎಂದು ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದರು. 
 
ಇನ್ನು ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಅವರು ನಮ್ಮ ಪಕ್ಷದಲ್ಲಿಯೇ ಉಳಿಯಬೇಕು. ನಾನು ಸತ್ತರೂ ಕೂಡ ಪಕ್ಷ ರಾಜ್ಯದಲ್ಲಿ ಉಳಿಯಬೇಕು ಎಂದು ಭಾವುಕರಾದರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments